ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಗ್ರರಿಗಿಂತ ನಕ್ಸಲರು ಅಪಾಯಕಾರಿ : ಪಿಎಂ
ನಗರದಲ್ಲಿ ಗುಪ್ತಚರ ಇಲಾಖೆ ಸಹಯೋಗದಲ್ಲಿ ಎಲ್ಲ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಉನ್ನತಮಟ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಗಡಿ ಪ್ರದೇಶದಲ್ಲಿ ಭಯೋತ್ಪಾದಕ ನುಸುಳುವಿಕೆ ಮತ್ತು ನಕ್ಸಲ್ ಹಾವಳಿ ದೇಶದ ರಕ್ಷಣೆಗೆ ಸವಾಲಾಗಿ ಪರಿಣಮಿಸಿವೆ. ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪ್ರಚೋದಿತ ಉಗ್ರರು ದೇಶದೊಳಗೆ ನುಸುಳುತ್ತಿರುವುದು ನಿತ್ಯದ ಸಂಗತಿಯಾಗಿದೆ ಎಂದು ಸಿಂಗ್ ಹೇಳಿದರು.
ಮುಖ್ಯವಾಗಿ ನೇಪಾಳ, ಬಾಂಗ್ಲಾದೇಶ ಗಡಿ ಪ್ರದೇಶದ ಜೊತೆಗೆ ಜಸಮಾರ್ಗಗಳ ಮೂಲಕವೂ ಉಗ್ರರು ದೇಶದೊಳಗೆ ಪ್ರವೇಶಿಸುತ್ತಿರುವುದು ತುಂಬಾ ಅಘಾತಕಾರಿಯಾದ ಅಂಶವಾಗಿದೆ. ಈ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿದೆ. ಸೋಮವಾರ ಗೃಹ ಸಚಿವ ಪಿ ಚಿದಂಬರಂ ಕೂಡಾ ಇದೇ ಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
(ಏಜನ್ಸೀಸ್)
Comments
Story first published: Tuesday, September 15, 2009, 17:36 [IST]