ಬೆಂಗಳೂರು-ಮೈಸೂರು ಹೆದ್ದಾರಿ ಯಮಪುರಿಯ ರಹದಾರಿ

ಸೂರ್ಯೋದಯಕ್ಕೂ ಮುನ್ನ ಪ್ರಾರಂಭವಾಗುವ ಈ ಮರಣಮೃದಂಗಕ್ಕೆ ಪ್ರತಿನಿತ್ಯ ಜನ-ಜಾನುವಾರುಗಳು, ಶ್ವಾನಗಳು ಬಲಿಯಾಗುತ್ತಿದ್ದು, ಈ ಮಾರ್ಗ ಸೀದಾ ಯಮಪುರಿಗೆ ಅವುಗಳನ್ನು ತಲುಪಿಸುತ್ತಿದೆ. ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವುನೋವುಗಳು ಸಂಭವಿಸುತ್ತಿದ್ದರೂ ಇವುಗಳನ್ನು ತಪ್ಪಿಸಲು ಸಂಬಂಧಿಸಿದ ಇಲಾಖೆ ಮಾತ್ರ ಯಾವ ಕ್ರಮ ಕೈಗೊಳ್ಳದಿರುವುದು ನಾಗರಿಕರನ್ನು ಚಿಂತೆಗೀಡುಮಾಡಿದೆ.
ಈ ಹೆದ್ದಾರಿಯು ಗ್ರಾಮಗಳ ಮಧ್ಯೆಯೇ ಹಾದುಹೋಗಿರುವುದರಿಂದ ಪಕ್ಕದಲ್ಲಿರುವ ಗ್ರಾಮವಾಸಿಗಳು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಈ ಹೆದ್ದಾರಿಯನ್ನು ದಾಟಬೇಕಾದ ಅನಿವಾರ್ಯತೆ ಇದ್ದು, ರಸ್ತೆ ದಾಟುವಾಗ ಸ್ವಲ್ಪ ಯಾಮಾರಿದರೂ ಬರುವ ಜವರಾಯನಿಗೆ ಆಹಾರವಾಗುವ ಪರಿಸ್ಥಿತಿ ಎದುರಾಗುತ್ತದೆ.
ಇನ್ನೊಂದು ದುರದೃಷ್ಟಕರ ಸಂಗತಿ ಎಂದರೆ, ಹೆದ್ದಾರಿಯ ಪಕ್ಕದಲ್ಲಿಯೇ ಶಾಲೆಗಳಿರುವುದು. ಒಂದು ಬದಿಯಲ್ಲಿ ಗ್ರಾಮದ ಮನೆಗಳಿದ್ದರೆ ರಸ್ತೆಯ ಇನ್ನೊಂದು ಬದಿಯಲ್ಲಿ ಶಾಲೆಗಳಿವೆ. ವಿದ್ಯಾರ್ಥಿಗಳು ಪ್ರತಿದಿನವೂ ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದ್ದು, ಎಷ್ಟೋ ಬಾರಿ ರಸ್ತೆ ದಾಟುವಾಗ ವಿದ್ಯಾರ್ಥಿಗಳು ಅಪಘಾತಕ್ಕೀಡಾಗಿ ಅಂಗಾಂಗವನ್ನೋ ಪ್ರಾಣವನ್ನೋ ಕಳೆದುಕೊಂಡಿರುವ ಉದಾಹರಣೆಗಳು ಹೇರಳವಾಗಿವೆ.
ತಾಲೂಕಿನ ಕೆಂಗಲ್, ಹನುಮಂತನಗರ, ದೊಡ್ಡಮಳೂರು, ಬೈರಾಪಟ್ಟಣ, ಮುದಗೆರೆ ಬಳಿ ಗ್ರಾಮಗಳ ಮಧ್ಯೆಯೇ ಹೆದ್ದಾರಿ ಹಾದುಹೋಗಿರುವುದರಿಂದ ರಸ್ತೆ ದಾಟಲು ಪರ್ಯಾಯ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಅಪಘಾತಗಳ ಸರಮಾಲೆಯೇ ಸಂಭವಿಸುತ್ತಿದೆ. ಇನ್ನು ತಾಲೂಕಿನ ದೊಡ್ಡಮಳೂರು, ಬೈರಾಪಟ್ಟಣ ಬಳಿಯಂತೂ ಪ್ರತಿದಿನ ಅಪಘಾತಗಳು ಸಂಭವಿಸುತ್ತಿದ್ದು, ಈವರೆಗೆ ಅಪಘಾತದ ನಿಯಂತ್ರಣ ಸಾಧ್ಯವೇ ಆಗಿಲ್ಲ.
ಅಪಘಾತ ಸಂಭವಿಸಿದಾಗ ತಮ್ಮ ಜಾಣತನ ತೋರಿಸುವ ಸಂಬಂಧಪಟ್ಟವರು, ಬ್ಯಾರಿಕೇಡ್, ರಸ್ತೆಯುಬ್ಬು ನಿರ್ಮಿಸಿ ಸ್ಥಳೀಯರ ಮನವೊಲಿಸುವ ಯತ್ನ ನಡೆಸುತ್ತಾರಾದರೂ ಎರಡು ದಿನ ಕಳೆದ ನಂತರ ತಾವೇ ನಿರ್ಮಿಸಿದ ರಸ್ತೆಯುಬ್ಬು, ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಅಪಘಾತಗಳಿಗೆ ಮತ್ತೆ ಪರೋಕ್ಷವಾಗಿ ಅವಕಾಶ ಕಲ್ಪಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಅಪಘಾತಗಳಿಂದ ರೋಸಿಹೋಗಿರುವ ಹೆದ್ದಾರಿ ಬದಿಯ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದರೂ ಈ ಪ್ರತಿಭಟನೆಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ. ರಸ್ತೆ ದಾಟುವ ಜಾಗದಲ್ಲಿ ರಸ್ತೆಯುಬ್ಬು ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದ್ದು, ಈ ರಸ್ತೆಯುಬ್ಬುಗಳು ಯಾವಾಗ ನಿರ್ಮಾಣವಾಗುತ್ತವೋ, ಯಾವಾಗ ಮಾಯವಾಗುತ್ತವೋ ಎಂಬುದೇ ತಿಳಿಯದಂತಾಗಿದೆ.
ಪ್ರತಿಭಟನೆ ನಡೆದಾಗ ಕಣ್ಣೊರೆಸಲು ಕ್ರಮ ಕೈಗೊಳ್ಳುವ ಇಲಾಖೆ, ನಂತರ ದಿನಗಳಲ್ಲಿ ಯಥಾಸ್ಥಿತಿ ಮುಂದುವರೆಸಿದೆ. ಮಂತ್ರಿ ಮಹೋದಯರ ಸುಗಮ ಸಂಚಾರ ನೆಪವಾಗಿಟ್ಟುಕೊಂಡು ತಾವೇ ನಿರ್ಮಿಸಿದ ರಸ್ತೆ ಉಬ್ಬುಗಳು ರಾತ್ರೋರಾತ್ರಿ ಮಾಯವಾಗುತ್ತಿವೆ. ಇನ್ನು ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು, ಗ್ರಾಮಗಳ ಹಾಗೂ ಶಾಲೆಗಳ ವ್ಯಾಪ್ತಿಯಲ್ಲಿ ವೇಗಮಿತಿ ಇಲ್ಲದೆ ಚಲಿಸುತ್ತವೆ. ಇದರಿಂದಾಗಿ ಹೆಚ್ಚು ಅಪಘಾತಗಳಿಗೆ ಅವಕಾಶವಿದ್ದು, ಅಪಘಾತ ಸಂಭವಿಸಿದರೆ ಪ್ರಾಣಹಾನಿ ಸಂಭವವೇ ಹೆಚ್ಚಾಗಿದೆ. ಇವುಗಳ ವೇಗಕ್ಕೆ ಪ್ರತಿನಿತ್ಯ ಜಾನುವಾರುಗಳು, ಶ್ವಾನಗಳು ಲೆಕ್ಕವಿಲ್ಲದಷ್ಟು ಬಲಿಯಾಗುತ್ತಿದ್ದು, ಇವುಗಳ ಮಾರಣಹೋಮಕ್ಕೆ ಕೊನೆಯೇ ಇಲ್ಲದಂತಾಗಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಅಪಘಾತಗಳನ್ನು ನಿಯಂತ್ರಿಸಲು ಗ್ರಾಮವ್ಯಾಪ್ತಿಗಳಲ್ಲಿ ಪಾದಚಾರಿ ಮೇಲ್ಸೇತುವೆಗಳ ಅವಶ್ಯಕತೆ ಇದ್ದು, ಇವುಗಳನ್ನು ನಿರ್ಮಿಸಲು ಸಂಬಂಧಪಟ್ಟ ಇಲಾಖೆಯನ್ನು ನಾಗರಿಕರು ಒತ್ತಾಯಿಸುತ್ತಲೇ ಇದ್ದಾರೆ. ಒಟ್ಟಾರೆ ಬೆಂಗಳೂರು-ಮೈಸೂರು ಹೆದ್ದಾರಿ ಎಂಬ ಯಮಪುರಿಯ ರಹದಾರಿಯಲ್ಲಾಗುತ್ತಿರುವ ಅಪಘಾತಗಳಿಗೆ ಯಾವಾಗ ಮುಕ್ತಿ ದೊರೆಯುವುದೋ ಕಾದುನೋಡಬೇಕಾಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications