ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತದಾರರೇ ಭ್ರಷ್ಟರು : ಜೆಡಿಎಸ್
ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ದಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಗುತ್ತೇದಾರ್, ಸಾರಾಯಿ ನಿಷೇಧವಿದ್ದರೂ ಹಳ್ಳಿ ಕಡೆ ಮದ್ಯ ಸೇವನೆ ಬಿಟ್ಟಿಲ್ಲ. ಹೀಗಾಗಿ ಸಾರಾಯಿ ನಿಷೇಧ ಹಿಂದಕ್ಕೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರಾಯಿ ನಿಷೇಧದ ಪರಿಣಾಮ ಕಳ್ಳಭಟ್ಟಿ ಹಾವಳಿ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಬರುತ್ತದೆ. ಮದ್ಯ ಸೇವನೆ ಹೊಸದೇನೂ ಅಲ್ಲ, ದೇವಾನುದೇವತೆಗಳ ಕಾಲದಿಂದಲೂ ನಡೆದು ಬಂದಿದೆ ಎಂದು ಶಾಸಕ ಗುತ್ತೇದಾರ್ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, September 11, 2009, 12:37 [IST]