ಮತದಾರರೇ ಭ್ರಷ್ಟರು : ಜೆಡಿಎಸ್
ಬೆಂಗಳೂರು,
ಸೆ. 11 : ರಾಜಕಾರಿಣಿಗಳನ್ನೇ ಭ್ರಷ್ಟರು ಎಂದು ಕರೆಯುವುದು ತಪ್ಪು. ಮತದಾರರೇ ಭ್ರಷ್ಟರು, ಚುನಾವಣಾ ಸಂದರ್ಭದಲ್ಲಿ ಮತ ಕೇಳಲು ಹಳ್ಳಿಗೆ ಹೋದಾಗ ನಮಗೆ ದೇವಾಲಯ ಕಟ್ಟಿಸಿಕೊಡಿ, ಕಲ್ಯಾಣ ಮಂಟಪ ಕಟ್ಟಿಸಿಕೊಡಿ ಎಂದು ದಂಬಾಲು ಬೀಳುತ್ತಾರೆ. ಇಟ್ಟಿಗೆ, ಸಿಮೆಂಟ್ ಬರುವ ತನಕ ಮತ ಹಾಕುವುದಿಲ್ಲ ಎನ್ನುತ್ತಾರೆ, ಹೀಗಾಗಿ ಮತದಾರರೇ ಭ್ರಷ್ಟರು ಎಂದು ಜನತಾದಳ ಶಾಸಕ ಸುಭಾಷ್ ಗುತ್ತೇದಾರ್ ಪ್ರತಿಪಾದಿಸಿದ್ದಾರೆ. id="toptextpromo">ವಿಧಾನಸಭೆಯಲ್ಲಿ
ಗ್ರಾಮೀಣಾಭಿವೃದ್ದಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಗುತ್ತೇದಾರ್, ಸಾರಾಯಿ ನಿಷೇಧವಿದ್ದರೂ ಹಳ್ಳಿ ಕಡೆ ಮದ್ಯ ಸೇವನೆ ಬಿಟ್ಟಿಲ್ಲ. ಹೀಗಾಗಿ ಸಾರಾಯಿ ನಿಷೇಧ ಹಿಂದಕ್ಕೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರಾಯಿ ನಿಷೇಧದ ಪರಿಣಾಮ ಕಳ್ಳಭಟ್ಟಿ ಹಾವಳಿ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಬರುತ್ತದೆ. ಮದ್ಯ ಸೇವನೆ ಹೊಸದೇನೂ ಅಲ್ಲ, ದೇವಾನುದೇವತೆಗಳ ಕಾಲದಿಂದಲೂ ನಡೆದು ಬಂದಿದೆ ಎಂದು ಶಾಸಕ ಗುತ್ತೇದಾರ್ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications