ನೈಸ್ ವಿವಾದ : ಅಶೋಕ್ ಖೇಣಿಗೆ ನೋಟಿಸ್

ಎಚ್ ವಿ ವಿಜಯರಾಘವನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹಾಗೂ ಜವ್ವಾದ್ ರಹೀಂ ಅವರ ಪೀಠ ಆದೇಶ ನೀಡಿದೆ. ಸುರೇಶ್ ಹೆಬ್ಳೀಕರ್ ಪ್ರಕರಣದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೆರೆಯನ್ನು ಸೀಳಿ ಅಲ್ಲಿ ನಿರ್ಮಾಣ ಕಾರ್ಯ ಮಾಡುವಂತಿಲ್ಲ ಎಂದು 1999ರ ಜೂನ್ ನಲ್ಲಿ ಹೈಕೋರ್ಟ್ ಆದೇಶಿಸಿತ್ತು.
ಆದರೂ ಗೊಟ್ಟಿಗೆರೆ ಕೆರೆಯ ಮಧ್ಯಭಾಗದಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದು ನ್ನಾಯಾಲಯ ಆದೇಶದ ಉಲ್ಲಂಘನೆ ಎಂದು ಆರೋಪಿಸಿ, ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಕರುಣಾಕರರೆಡ್ಡಿ, ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ, ಪರಿಸರ ಮಾಲಿನ್ಯ ಇಲಾಖೆ ಹಾಗೂ ಮೈಸ್ ಸಂಸ್ಥೆ ಅಧಿಕಾರಿಗಳು ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications