ಜಯನಗರದಲ್ಲಿ ಪ್ರಪ್ರಥಮ ಸಾರಿಗೆ ಮಾಲ್ ಪ್ರಾರಂಭ

Yeddyurappa inaugurates first TTMC at Jayanagar
ಬೆಂಗಳೂರು, ಆ. 31 : ಇಡೀ ದೇಶದಲ್ಲಿ ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ವತಿಯಿಂದ ಜೆಎನ್‌ಯುಆರ್‌ಎಂ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರಪ್ರಥಮವಾಗಿ ಪೂರ್ಣಗೊಳಿಸಲಾಗಿದೆ. ಇಡೀ ರಾಜ್ಯಕ್ಕೆ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರವನ್ನು ಕೋರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದಿಲ್ಲಿ ತಿಳಿಸಿದರು.

ಅವರು ಬೆಂಗಳೂರು ಬಿ.ಎಂ.ಟಿ.ಸಿ.ಯು ಜೆಎನ್‌ಯುಆರ್‌ಎಂ ಅಡಿ ಜಯನಗರದಲ್ಲಿ ನಿರ್ಮಿಸಿರುವ ಸಂಚಾರ ಮತ್ತು ಸಾಗಣೆ ವ್ಯವಸ್ಥೆ ಕೇಂದ್ರದ ಉದ್ಫಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ನಗರದ ಸಂಚಾರದ ವ್ಯವಸ್ಥೆ ಮತ್ತು ನಿರ್ವಹಣೆ ಬಹಳ ಮುಖ್ಯವಾದದ್ದು, ನಗರದ ಸರ್ವತೋಮುಖ ಅಭಿವೃದ್ಧಿ ಗುರಿಯಿಂದ ಕೆಲಸ ಮಾಡುತ್ತಿರುವ ಸರ್ಕಾರ ಎಲ್ಲಾ ನಾಗರೀಕರ ಕನಸನ್ನು ನನಸು ಮಾಡುವ ಗುರಿ ಹೊಂದಿದೆ. ಯಾವುದೇ ಸಂದರ್ಭದಲ್ಲಿ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ. ಗುಣಮಟ್ಟಕ್ಕೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಒಟ್ಟಾರೆ 500 ಕೋಟಿ ರೂಗಳನ್ನು ನಗರದ ವಿವಿಧ ಭಾಗಗಳ 9 ಕೇಂದ್ರಗಳಲ್ಲಿನ ಕಾಮಗಾರಿಗಳಿಗಾಗಿ ನೀಡಲಾಗಿದೆ ಎಂದು ಅವರು ತಿಳಿಸಿದರು. ಬರುವ ಡಿಸೆಂಬರ್ ವೇಳೆಗೆ ಮೆಟ್ರೋ ರೈಲು ಕೆಲಸ ಮುಗಿಯಲಿದೆ ಎಂಬ ಅಂಶವನ್ನು ಸಹ ಅವರು ತಿಳಿಸಿದರು.

ಸಾರಿಗೆ ಸಚಿವ ಆರ್. ಅಶೋಕ್ ಅವರು ಮಾತನಾಡುತ್ತಾ, ನಗರದಲ್ಲಿ ವೋಲ್ವೋ, ಮರ್ಚಿಂಡ್ಸ್ ಬೆನ್ಜ್, ಪರೋನಾ, ಎಲ್ಲ ಬಗೆಯ ಸಾರಿಗೆ ಬಸ್‌ಗಳನ್ನು ಒದಗಿಸಲಾಗಿದ್ದು, ಬಡವರಿಗಾಗಿ ಶೇಕಡಾ 50 ದರದಲ್ಲಿ ಅಟಲ್ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ. ಬೆಂಗಳೂರು ನಗರವು ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದೇ ಸೆಪ್ಟೆಂಬರ್ 5ರಂದು ಕೇಂದ್ರದ ನಗರಾಭಿವೃದ್ಧಿ ಸಚಿವರು ನಗರಕ್ಕೆ ಆಗಮಿಸಲಿದ್ದಾರೆ ಎಂದರು.

ಇಂದು ಉದ್ಫಾಟನೆಯಾದ ಸಂಚಾರ ಮತ್ತು ಸಾಗಣೆ ವ್ಯವಸ್ಥೆ ಕೇಂದ್ರವನ್ನು 12.90 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸಿದ್ದು, ಇದರಲ್ಲಿ ಆರೋಗ್ಯ ಕೇಂದ್ರಗಳು, ಪುಡ್ ಕೋರ್ಟ್, ಡಿಪಾರ್ಟ್‌ಮೆಂಟಲ್ ಸ್ಟೋರ್, ಪುಸ್ತಕದಂಗಡಿ, ಗೃಹ ಬಳಕೆ ವಸ್ತುಗಳು, ಅಂಚೆ ಕಚೇರಿ, ಬೆಂಗಳೂರು ಒನ್ ಕೇಂದ್ರ, ಸೈಬರ್ ಕೆಫೆ, ಬ್ಯಾಂಕ್, ಎ.ಟಿ.ಎಂ. ಕೌಂಟರ್‍ ಹಾಗೂ ವಿಮಾನ ಮುಂಗಡ ಕಾಯ್ದಿರಿಸುವ ಕೌಂಟರ್, ಮತ್ತಿತರ ಸೌಲಭ್ಯಗಳನ್ನು ಒಂದೇ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಿದೆ.

ಕೆಂಗೇರಿ, ಶಾಂತಿನಗರ, ಕೋರಮಂಗಲ, ವಿಜಯನಗರ, ಬನಶಂಕರಿ, ಐ.ಟಿಪಿ.ಎಲ್ , ಯಶವಂತಪುರ, ದೊಮ್ಮಲೂರು ಮತ್ತು ಬನ್ನೇರುಘಟ್ಟ ಈ ಒಂಭತ್ತು ಸ್ಥಳಗಳಲ್ಲೂ ಟಿ.ಟಿ.ಎಂ.ಸಿ. ಕಾರ್ಯಪ್ರಗತಿಯಲ್ಲಿದ್ದು ಜುಲೈ 2010ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ನಗರಾಭಿವೃದ್ಧಿ ಕಾರ್ಯಪಡೆ ಅಧ್ಯಕ್ಷರು ಹಾಗೂ ಲೋಕಸಭಾ ಸದಸ್ಯರು ಆದ ಅನಂತಕುಮಾರ್ ಅವರು ಟಿ.ಟಿ.ಎಂ.ಸಿ. ಎಂದು ಕರೆಯುವ ಬದಲಾಗಿ ಸಾರಿಗೆ ಮಾಲ್ ಎಂದು ಕರೆಯಲು ಸಲಹೆ ಮಾಡಿದರು. ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಯಾವುದೇ ಟಿಕೇಟ್ ಇಲ್ಲದೆ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ವಿದ್ಯಾ ಸಾರಿಗೆ (ಯೋಜನೆ ಜಾರಿಯ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂಬ ಅಂಶವನ್ನು ತಿಳಿಸಿದರು. ಈ ಸಾರಿಗೆ ಮಾಲ್‌ನಲ್ಲಿ ರೈಲ್ವೆ ಬುಕ್ಕಿಂಗ್ ಕೌಂಟರ್ ತೆರೆಯಲು ಸಹ ಸಲಹೆ ಮಾಡಿದರು. ಜೆ.ಎನ್.ಯು.ಆರ್.ಎಂ. ಅಡಿಯಲ್ಲಿ 800 ಕೋಟಿ ರೂ ಗಳು ಕರ್ನಾಟಕದ ಪಾಲಿಗೆ ಬಂದಿದೆ. ಇದು ಮಾದರಿ ವ್ಯವಸ್ಥೆ ಎಂಬುದಾಗಿ ಕೇಂದ್ರ ಸಚಿವರು ಹೇಳಿರುವುದು ಹೆಮ್ಮೆಯ ವಿಚಾರ ಎಂದರು.

ಸ್ಥಳೀಯ ಶಾಸಕರಾದ ವಿಜಯಕುಮಾರ್ ಸಹ ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಕೇಂದ್ರದ ವಿಶೇಷ ಕರ್ತವ್ಯಾಧಿಕಾರಿ ಎಸ್. ಕೆ. ಲೋಹಿಯಾ ಶಾಸಕರುಗಳಾದ ಸತೀಶ್ ರೆಡ್ಡಿ, ಹೇಮಚಂದ್ರ ಸಾಗರ್, ರವಿಸುಬ್ರಮಣ್ಯ, ಕೃಷ್ಣಪ್ಪ, ರಘು, ನಗರಾಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿಗಳ ಸಲಹೆಗಾರರಾದ ಎ. ರವೀಂದ್ರ, ಸಾರಿಗೆ ಇಲಾಖಾ ಕಾರ್ಯದರ್ಶಿಗಳಾದ ಶಂಕರಲಿಂಗೇಗೌಡ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+