ಬಿಜೆಪಿ ನಾಯಕರ ವಿರುದ್ಧ ಬಂಡೆದ್ದ ಖಂಡೂರಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಕಂಡ ದಯನೀಯ ಸೋಲಿನ ನಂತರ ನನ್ನನ್ನು ನೇರ ಹೊಣೆಗಾರನನ್ನಾಗಿ ಮಾಡಿದ ವರಿಷ್ಟರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಿದರು. ಹಾಗಾದರೆ ರಾಷ್ಟ್ರಮಟ್ಟದಲ್ಲಿ ಪಕ್ಷದ ಸೋಲಿಗೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆಂದು ಖಂಡೂರಿ ಪತ್ರದಲ್ಲಿ ಬರೆದಿದ್ದಾರೆ. ರಾಜ್ಯದಲ್ಲಿ ಈಗಲೂ ನನ್ನ ಜನಪ್ರಿಯತೆಗೆ ಧಕ್ಕೆ ಬಂದಿಲ್ಲ ಎಂದಿದ್ದಾರೆ.
ನನಗೆ 27 ಶಾಸಕರು ಭೇಷರತ್ ಬೆಂಬಲ ನೀಡಲು ಸಿದ್ದರಿದ್ದಾರೆ. ನನ್ನನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಭಾರಿ ನೋವು ತಂದಿದೆ. ವಾಜಪೇಯಿ ಅವರ ಅಸ್ವಸ್ಥತೆ ನಮ್ಮನ್ನು ತುಂಬಾ ಕಾಡುತ್ತಿದೆ ಎಂದು ಖಂಡೂರಿ ಹೇಳಿಕೆ ನೀಡಿದ್ದಾರೆ.
(ಏಜನ್ಸೀಸ್)












Click it and Unblock the Notifications