ಮೌಲಾನಾ ಮಸೂದ್ ಅಜರ್ ಉಗ್ರನಲ್ಲ: ಚೀನಾ
ನವದೆಹಲಿ, ಆ.16: ಪಾಕಿಸ್ತಾನ ಮೂಲದ ಜೈಷೆ ಮೊಹಮದ್ ಸಂಘಟನೆಯ ನಾಯಕ ಮಸೂದ್ ಅಜರ್ನನ್ನು ಉಗ್ರಗಾಮಿ ಎಂದು ಒಪ್ಪಿಕೊಳ್ಳಬೇಕೆಂಬ ಭಾರತದ ಮನವಿಯನ್ನು ತಿರಸ್ಕರಿಸಿರುವ ಚೀನಾ, ಪಾಕಿಸ್ತಾನದ ಮೇಲಿನ ತನ್ನ ಒಲವನ್ನು ಬಹಿರಂಗವಾಗಿಯೇ ತೋರಿಸಿದೆ.
ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿ, ಉಗ್ರಗಾಮಿ ಎಂದು ಪರಿಗಣಿಸಿ ಬಹಿಷ್ಕಾರ ಹೇರಬೇಕೆಂಬುದು ಭಾರತದ ನಿಲುವಾ
ಗಿತ್ತು. ಇದರಿಂದ ಆತನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಭಾರತಕ್ಕೆ ಸುಲಭವಾಗುತ್ತಿತ್ತು. ಅಜರ್ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗವಹಿಸಿದ್ದಾನೆ ಎಂಬುದರ ಬಗ್ಗೆ ಸಮರ್ಪಕ ಮಾಹಿತಿಗಳಿಲ್ಲ ಎಂದಿದ್ದ ಭದ್ರತಾ ಮಂಡಳಿಯ ಪ್ರಮುಖ ರಾಷ್ಟ್ರಗಳಾದ ಬ್ರಿಟನ್ ಹಾಗೂ ಚೀನಾಗಳು ನಿಷೇಧಕ್ಕೆ ತಗಾದೆ ತೆಗೆದವು. ಕ್ರಮೇಣ ಬ್ರಿಟನ್ನ ಮನವೊಲಿಸಲು ಭಾರತ ಸಫಲವಾಯಿತು.
ತನ್ನ ನಿರ್ಣಯ ವನ್ನು ಕಾಯ್ದಿಟ್ಟಿದ್ದ ಚೀನಾ, ಕಂದಹಾರ್ ವಿಮಾನ ಅಪಹರಣದಲ್ಲಿ ಒತ್ತೆಯಾಳುಗಳ ಬದಲಿಗೆ ಬಿಡುಗಡೆಯಾದ ಮಸೂದ್ ಅಜರ್ನನ್ನು ಉಗ್ರಗಾಮಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದೆ. ಅಜರ್ನನ್ನು ಉಗ್ರನೆಂದು ಸಾರಲು ಕೆಲ ತಾಂತ್ರಿಕ' ಕಾರಣಗಳು ಅಡ್ಡ ಬರುತ್ತವೆ. ಹೀಗಾಗಿ ರಾಜಕೀಯವಾಗಿ ಭಾರತ ಎಷ್ಟೇ ಮಾಹಿತಿಗಳನ್ನು ಒದಗಿಸಿ ದರೂ ನಮ್ಮ ಮನವೊಲಿಕೆ ಸಾಧ್ಯವಾಗದು' ಎಂದು ಚೀನಾ ಒಗಟಾಗಿ ಮಾತನಾಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆ ಗಾರ ಎಮ್. ಕೆ. ನಾರಾಯಣನ್ ಹಾಗೂ ಚೀನಾದ ಸ್ಟೇಟ್ ಕೌನ್ಸಿಲರ್ ಡೈ ಬಿಂಗೊ ನಡುವೆ ಈ ನಿಟ್ಟಿನಲ್ಲಿ ಮಾತುಕತೆ ನಡೆದಿತ್ತು.
ಕ್ಸಿನ್ಜಿಯಾಂಗ್ನಲ್ಲಿ ನಡೆದ ದಂಗೆಯ ಬಳಿಕ ಚೀನಾಕ್ಕೆ ಇಸ್ಲಾಮಿಕ್ ಉಗ್ರವಾದದ ಬಿಸಿ ಮುಟ್ಟಿರುವುದು ಅದರ ನಿಲುವಿನ ಮೇಲೆ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಕಮರಿದೆ. ಮಸೂದ್ ಅಜರ್ಗೆ ಆಶ್ರಯ ನೀಡಿರುವ ಪಾಕಿಸ್ತಾನದ ಹಿತಾ ಸಕ್ತಿ ಕಾಯುವಲ್ಲಿ ಚೀನಾ ಹೆಜ್ಜೆ ಇಟ್ಟಿದೆ.
(ದಟ್ಸ್ ಕನ್ನಡವಾರ್ತೆ)
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ












Click it and Unblock the Notifications