ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಸಿಎಂಗೆ ಅಹ್ವಾನ
ಬೆಂಗಳೂರು, ಆ. 12 : ಚೆನ್ನೈನ ಆಯನಾವರಂನ ಜೀವಾ ಪಾರ್ಕ್ ನಲ್ಲಿ ಗುರುವಾರ ಕನ್ನಡದ ಶ್ರೇಷ್ಠ ಕವಿ ಸರ್ವಜ್ಞನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ತಮಿಳುನಾಡು ಸರಕಾರ ಅಧಿಕೃತ ಆಹ್ವಾನ ನೀಡಿದೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಮುಖ್ಯಮಂತ್ರಿಗಳ ನಿವಾಸ ಕೃಷ್ಣಕ್ಕೆ ಆಗಮಿಸಿದ ತಮಿಳುನಾಡಿನ ವಾರ್ತಾ ಹಾಗೂ ಪ್ರಸಾರ ಇಲಾಖೆ ಖಾತೆ ಸಚಿವ ಪಾರುತಿ ಇಳಂವಾಳುತಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಧಿಕೃತ ಅಹ್ವಾನ ಪತ್ರ ನೀಡಿದರು. ಯಡಿಯೂರಪ್ಪ ಅವರೊಂದಿಗೆ ಸಚಿವರ ದಂಡು ಹಾಗೂ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ, ಹಂಪಾ ನಾಗರಾಜ್, ದೊಡ್ಡರಂಗೇಗೌಡ ಸೇರಿದಂತೆ ವಿವಿಧ ಗಣ್ಯರು ನಾಳೆ ಚೆನ್ನೈಗೆ ತೆರಳಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
chennai ಯಡಿಯೂರಪ್ಪ kannada ಚೆನ್ನೈ ಕನ್ನಡ karunanidhi ತಿರುವಳ್ಳುವರ್ ಎಂ ಕರುಣಾನಿಧಿ ಪ್ರತಿಮೆ tiruvalluvar statue ಸರ್ವಜ್ಞ
Story first published: Wednesday, August 12, 2009, 18:38 [IST]