ಸಚಿವೆ ಶೋಭಾ ಕರಂದ್ಲಾಜೆ ಕುರ್ಚಿಗೆ ಸಂಚಕಾರ

ಮೈಸೂರಿನ ಶಾಸಕರೂ ಸೇರಿದಂತೆ ಪಕ್ಷದ ಮುಖಂಡರು ಬಯಸಿದರೆ ಸಚಿನ ಸ್ಥಾನದಿಂದ ಶೋಭಾ ಅವರನ್ನು ತಕ್ಷಣವೇ ಬದಲಾಯಿಸಲಾಗುವುದು ಎಂದು ಅವರು ಹೇಳಿಕೆ ನೀಡಿದ್ದಾರೆ. ಒಳ್ಳೇಯ ಕೆಲಸ ಮಾಡುವವರ ವಿರುದ್ಧ ಕೆಟ್ಟ ದೃಷ್ಟಿ ಯಾವಾಗಲೂ ಇರುತ್ತದೆ. ಅದೇನೆ ಇರಲಿ, ಪಕ್ಷದ ಮುಖಂಡರು ಬಯಸಿದಲ್ಲಿ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳಲು ಸಿದ್ಧ ಎಂದು ಹೇಳಿದರು.
ಶೋಭಾ ಅವರೇ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ತಮಗೆ ಉಸ್ತುವಾರಿ ಸ್ಥಾನ ಬೇಡ. ತಮ್ಮನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಮನವಿ ಮಾಡಿದ್ದರು. ಆಗ ಶಾಸಕ ಶಂಕರಲಿಂಗೇಗೌಡ ಮತ್ತು ರಾಮದಾಸ್ ಅವರು ಶೋಭಾ ಅವರೇ ಮುಂದುವರೆಯಲಿ ಎಂದು ಹೇಳಿದ್ದರು. ಒಟ್ಟಿನಲ್ಲಿ ಶೋಭಾ ವಿರುದ್ಧದ ಅಸಮಾಧಾನ ಮುಖ್ಯಮಂತ್ರಿವರೆಗೂ ತಲುಪಿದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications