ಸಚಿವೆ ಶೋಭಾ ಕರಂದ್ಲಾಜೆ ಕುರ್ಚಿಗೆ ಸಂಚಕಾರ

Shobha Karandlaje
ಮೈಸೂರು, ಆ.11 : ಬಿಜೆಪಿಯಲ್ಲಿ ಬಂಡಾಯ ಬಿಸಿ ದಿನದಿನಕ್ಕೆ ದಟ್ಟವಾಗುತ್ತಿದ್ದು, ಮೈಸೂರು ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪಕ್ಷದಲ್ಲಿ ಕೆಲವರಿಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಕೊಳ್ಳೇಗಾಲ ಉಪಚುನಾವಣೆ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ಕೈಕೊಳ್ಳಲು ಆಗಮಿಸಿ ಟಿ ನರಸೀಪುರದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಿಕರಣ ನೀಡಿದ್ದಾರೆ.

ಮೈಸೂರಿನ ಶಾಸಕರೂ ಸೇರಿದಂತೆ ಪಕ್ಷದ ಮುಖಂಡರು ಬಯಸಿದರೆ ಸಚಿನ ಸ್ಥಾನದಿಂದ ಶೋಭಾ ಅವರನ್ನು ತಕ್ಷಣವೇ ಬದಲಾಯಿಸಲಾಗುವುದು ಎಂದು ಅವರು ಹೇಳಿಕೆ ನೀಡಿದ್ದಾರೆ. ಒಳ್ಳೇಯ ಕೆಲಸ ಮಾಡುವವರ ವಿರುದ್ಧ ಕೆಟ್ಟ ದೃಷ್ಟಿ ಯಾವಾಗಲೂ ಇರುತ್ತದೆ. ಅದೇನೆ ಇರಲಿ, ಪಕ್ಷದ ಮುಖಂಡರು ಬಯಸಿದಲ್ಲಿ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳಲು ಸಿದ್ಧ ಎಂದು ಹೇಳಿದರು.

ಶೋಭಾ ಅವರೇ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ತಮಗೆ ಉಸ್ತುವಾರಿ ಸ್ಥಾನ ಬೇಡ. ತಮ್ಮನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಮನವಿ ಮಾಡಿದ್ದರು. ಆಗ ಶಾಸಕ ಶಂಕರಲಿಂಗೇಗೌಡ ಮತ್ತು ರಾಮದಾಸ್ ಅವರು ಶೋಭಾ ಅವರೇ ಮುಂದುವರೆಯಲಿ ಎಂದು ಹೇಳಿದ್ದರು. ಒಟ್ಟಿನಲ್ಲಿ ಶೋಭಾ ವಿರುದ್ಧದ ಅಸಮಾಧಾನ ಮುಖ್ಯಮಂತ್ರಿವರೆಗೂ ತಲುಪಿದಂತಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+