ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಅಂದ್ರೆ ಸಿಎಂಗೆ ಜಾಲಿ ಟ್ರಿಪ್ ಇದ್ದಂತೆ: ಎಚ್ಡಿಕೆ

By Staff
|
Google Oneindia Kannada News

HD Kumaraswamy
ಬೆಂಗಳೂರು, ಆ 7: ಕೇಂದ್ರ ನೀಡುವ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ ಪದೇಪದೇ ದೆಹಲಿಗೆ ಹೋಗುವುದು ಮುಖ್ಯಮಂತ್ರಿಗಳಿಗೆ ಅಭ್ಯಾಸವಾದಂತಿದೆ. ರಾತ್ರೋರಾತ್ರಿ ದೆಹಲಿಗೆ ಬರುವಂತೆ ಆಹ್ವಾನ ನೀಡಿ ಪ್ರತಿಪಕ್ಷಗಳು ಸಹಕರಿಸಲಿಲ್ಲ ಎಂದು ಆರೋಪ ಮಾಡುತ್ತಾರೆ. ದೆಹಲಿಗೆ ಹೋಗುವುದು ಅವರಿಗೆ ಜಾಲಿ ಟ್ರಿಪ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಒಂದುವಾರದ ಮುಂಚೆ ಮಾಹಿತಿ ನೀಡಬೇಕು ಎಂದು ಅವರಿಗೆ ತಿಳಿಯುವುದಿಲ್ಲವೇ, ಅವರು ಹೇಳಿದ ತಕ್ಷಣ ಅವರ ಮುಂದೆ ಹಾಜರಾಗೋಕೆ ನಾವೇನು ಅವರ ಕೆಲಸದಾಳುಗಳಾ. ಒಂದು ನಿಯೋಗ ದೆಹಲಿಗೆ ಕರೆದೊಯ್ಯುವುದೆಂದರೆ 50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದೇ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ಬಳಸಿಕೊಳ್ಳಲಿ. ಆಯಾಯ ಖಾತೆಗಳಿಗೆ ಸಂಬಂಧಪಟ್ಟ ಸಚಿವರನ್ನು ಕರೆದುಕೊಂಡು ಹೋದರೆ ಸಾಲುವುದಿಲ್ಲವೇ ಎಂದು ಪ್ರತಿಕ್ರಿಯೆ ನೀಡಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದೆಗೆಟ್ಟಿದೆ ಎಂದು ಆರೋಪ ಮಾಡಿದ ಕುಮಾರಸ್ವಾಮಿ, ಸರಕಾರಿ ನೌಕರರಿಗೆ ವೇತನ ನೀಡಲು ಖಜಾನೆಯಲ್ಲಿ ಹಣವಿಲ್ಲದೆ ಎರಡು ಸಾವಿರ ಕೋಟಿ ಸಾಲ ಪಡೆಯಲಾಗಿದೆ. ಭ್ರಷ್ಟಾಚಾರಕ್ಕೆ ಪಾರದರ್ಶಕದಂತೆ ಇರುವ ಬಿಜೆಪಿ ಸರಕಾರ ಸಾಲ ಪಡೆದ ಹಣವನ್ನು ಯಾವ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಿದರು ಎಂದು ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X