ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೆಹಲಿ ಅಂದ್ರೆ ಸಿಎಂಗೆ ಜಾಲಿ ಟ್ರಿಪ್ ಇದ್ದಂತೆ: ಎಚ್ಡಿಕೆ
ಒಂದುವಾರದ ಮುಂಚೆ ಮಾಹಿತಿ ನೀಡಬೇಕು ಎಂದು ಅವರಿಗೆ ತಿಳಿಯುವುದಿಲ್ಲವೇ, ಅವರು ಹೇಳಿದ ತಕ್ಷಣ ಅವರ ಮುಂದೆ ಹಾಜರಾಗೋಕೆ ನಾವೇನು ಅವರ ಕೆಲಸದಾಳುಗಳಾ. ಒಂದು ನಿಯೋಗ ದೆಹಲಿಗೆ ಕರೆದೊಯ್ಯುವುದೆಂದರೆ 50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದೇ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ಬಳಸಿಕೊಳ್ಳಲಿ. ಆಯಾಯ ಖಾತೆಗಳಿಗೆ ಸಂಬಂಧಪಟ್ಟ ಸಚಿವರನ್ನು ಕರೆದುಕೊಂಡು ಹೋದರೆ ಸಾಲುವುದಿಲ್ಲವೇ ಎಂದು ಪ್ರತಿಕ್ರಿಯೆ ನೀಡಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದೆಗೆಟ್ಟಿದೆ ಎಂದು ಆರೋಪ ಮಾಡಿದ ಕುಮಾರಸ್ವಾಮಿ, ಸರಕಾರಿ ನೌಕರರಿಗೆ ವೇತನ ನೀಡಲು ಖಜಾನೆಯಲ್ಲಿ ಹಣವಿಲ್ಲದೆ ಎರಡು ಸಾವಿರ ಕೋಟಿ ಸಾಲ ಪಡೆಯಲಾಗಿದೆ. ಭ್ರಷ್ಟಾಚಾರಕ್ಕೆ ಪಾರದರ್ಶಕದಂತೆ ಇರುವ ಬಿಜೆಪಿ ಸರಕಾರ ಸಾಲ ಪಡೆದ ಹಣವನ್ನು ಯಾವ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಿದರು ಎಂದು ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, August 7, 2009, 10:01 [IST]