ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆ. 15ರೊಳಗೆ ಮೈಸೂರು ವಿಮಾನ ನಿಲ್ದಾಣ
ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಈ ವರ್ಷದ ದಸರಾ ಆರಂಭಕ್ಕೆ ಮುನ್ನ ವಿಮಾನ ನಿಲ್ದಾಣ ಸಜ್ಜುಗೊಂಡು ಪ್ರವಾಸಿಗರಿಗೆ ವಿಮಾನಯಾನ ಸೇವೆ ಲಭ್ಯವಾಗಬೇಕು ಎಂದು ಹೇಳಿದರು. ಮೈಸೂರು ಪ್ರವಾಸೊದ್ಯಮಕ್ಕೆ ಇದರಿಂದ ಹೆಚ್ಚಿನ ಒತ್ತು ಸಿಗುತ್ತದೆ. ಶಿವಮೊಗ್ಗ , ಗುಲ್ಬರ್ಗಾಗಳಲ್ಲೂ ಇದೇ ವರ್ಷ ವಿಮಾನ ನಿಲ್ದಾಣಗಳು ಸಜ್ಜುಗೊಳ್ಳಲಿದ್ದು ಇದರಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸಿ ಸಂಪರ್ಕ ಸುಲಭವಾಗುತ್ತದೆ ಎಂದು ಅವರು ಹೇಳಿದರು.
ನಿವೃತ್ತ ಸರ್ಕಾರಿ ನೌಕರರ ಕಲ್ಯಾಣಕ್ಕೆ 50 ಕೋಟಿ
ರಾಜ್ಯ ಸರ್ಕಾರವು ನಿವೃತ್ತ ಸರ್ಕಾರಿ ನೌಕರರ ಅಭಿವೃದ್ಧಿಗಾಗಿ ಇನ್ನೂ ಐವತ್ತು ಕೋಟಿ ರೂಪಾಯಿ ವೆಚ್ಚ ಮಾಡಲು ಸಿದ್ದವಿದೆ ಹಾಗೂ ಹಿರಿಯರಾದ ಅವರುಗಳ ಸೇವೆ ರಾಜ್ಯ ಸರ್ಕಾರಕ್ಕೆ ಅಗತ್ಯವಿದ್ದು, ಒಂದಿಲ್ಲೊಂದು ರೀತಿ ಅವರ ಸೇವೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, August 6, 2009, 13:41 [IST]