ದಾವೂದ್ ಹಸ್ತಾಂತರಿಸಲು ಪಾಕ್ ನಕಾರ : ಕೃಷ್ಣ
ಪ್ರತಿಪಕ್ಷಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ, ಭಾರತ ಮತ್ತು ಪಾಕಿಸ್ತಾನದ ನಿವಾಸಿಗಳು ಸೇರಿದಂತೆ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ 42 ಉಗ್ರರ ಹಸ್ತಾಂತರಕ್ಕೆ ಪಾಕಿಸ್ತಾನ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟ ಮತ್ತು ಕಳೆದ ವರ್ಷ ನಡೆದ ನವೆಂಬರ್ ನಲ್ಲಿ ಮುಂಬೈ ಭಯೋತ್ಪಾದನೆಯಲ್ಲಿ ಕೈವಾಡವಿರುವ ಎಲ್ಲ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಪಾಕಿಸ್ತಾನಕ್ಕೆ ಒತ್ತಾಯಿಸಲಾಗಿದೆ. ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಾಧಾರಗಳನ್ನು ಕೂಡಾ ಪಾಕ್ ಗೆ ರವಾನಿಸಲಾಗಿದೆ ಎಂದು ವಿವರರಿಸಿದರು.
ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಟೈಗರ್ ಮೆಮನ್, ಲಖ್ಬೀರ್ ಸಿಂಗ್ ಸೇರಿ 42 ಮಂದಿ ಉಗ್ರರ ಪಟ್ಟಿಯಲ್ಲಿದ್ದಾರೆ. ಅನೇಕ ಸಾಕ್ಷ್ಯಾಧಾರಗಳನ್ನು ನೀಡಲಾಗಿದೆ. ಈ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಪಾಕಿಸ್ತಾನಕ್ಕೆ 11 ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಪಾಕ್ ಮಾತ್ರ ಸಾಕ್ಷ್ಯಾದಾರಗಳ ಕೊರತೆಯನ್ನು ತೋರಿಸುತ್ತಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)