ಎಲ್ಲಾ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು
ಸೋಮವಾರ ಸಿಂಧ್ಯಾ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ಬಹುತೇಕ ಸಿಂಧ್ಯಾ ಅವರೇ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಕಾಂಗ್ರೆಸ್ ಬೆಂಬಲವನ್ನು ಸಹ ಪಡೆದುಕೊಳ್ಳುವ ನಿಟ್ಟಿನಲ್ಲಿ ಇಬ್ಬರು ಮುಖಂಡರ ನಡುವೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಆ ಮೊದಲು ಗೋವಿಂದರಾಜ ನಗರ, ಚಿತ್ತಾಪುರ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುವುದು ಬೇಡವೆಂಬ ನಿರ್ಧಾರ ಕೈಗೊಂಡಿದ್ದ ಪಕ್ಷದ ಮುಖಂಡರು, ಈಗ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮೈತ್ರಿ ಸಂಬಂಧ ಕಾಂಗ್ರೆಸ್ ನಿಂದ ಸರಿಯಾದ ಪ್ರತಿಕ್ರಿಯೆ ಬಾರದೇ ಇರುವ ಹಿನ್ನೆಲೆಯಲ್ಲಿ ಎಲ್ಲ ಐದೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
*
ಕೊಳ್ಳೇಗಾಲ
-
ಬಾಲರಾಜು
*
ಚನ್ನಪಟ್ಟಣ
-
ಎಂ
ಸಿ
ಅಶ್ವಥ್
*
ಚಿತ್ತಾಪುರ
-
ಬೆಣ್ಣೂರು
ಅಥವಾ
ಬಸವರಾಜು
*
ರಾಮನಗರ
-
ಮರಿಲಿಂಗೇಗೌಡ
ಅಥವಾ
ಮರಿಯಪ್ಪ
ಅಥವಾ
ಪಿಜಿಆರ್
ಸಿಂಧ್ಯಾ
*
ಗೋವಿಂದರಾಜ
ನಗರ
-
ರಂಗೇಗೌಡ
ಅಥವಾ
ಮರಿಯಪ್ಪ
(ದಟ್ಸ್ ಕನ್ನಡ ವಾರ್ತೆ)