ಗೊಬ್ಬರ ಕಾಳಸಂತೆ ವಿರುದ್ಧ ದಂಗೆಯೆದ್ದ ರೈತರು

ಹರಮಘಟ್ಟ ಮತ್ತು ಮತ್ತೂರು ಗ್ರಾಮ ಪಂಚಾಯತ್ಗಳ ವ್ಯಾಪ್ತಿಗೆ 25 ಲೋಡ್ಗಳಷ್ಟು ಗೊಬ್ಬರದ ಅಗತ್ಯವಿದೆ. ಸರ್ಕಾರ ಮೊದಲಿಗೆ ಒಂದು ಲೋಡ್ ಗೊಬ್ಬರ ನೀಡಿದರೆ, 10ರಿಂದ 15 ದಿನಗಳನ್ನು ಬಿಟ್ಟು ಮತ್ತೊಂದು ಲೋಡ್ ಗೊಬ್ಬರವನ್ನು ನೀಡುತ್ತಿದೆ. ಈ ನೀತಿಯನ್ನು ಕೈಬಿಟ್ಟು ಒಟ್ಟಿಗೆ ಗೊಬ್ಬರವನ್ನು ಪೂರೈಸಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ರೈತರಿಗೆ ಸಿಗಬೇಕಾದ ಗೊಬ್ಬರ ಕಾಳಸಂತೆಯಲ್ಲಿ ಬಿಕರಿಯಾಗುತ್ತಿದ್ದು, ರೈತರು ಅನಿವಾರ್ಯವಾಗಿ ಕಾಳಸಂತೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ರೈತರಿಗೆ ಸೂಕ್ತ ಸಮಯದಲ್ಲಿ ಗೊಬ್ಬರ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ಗಳ ಮಟ್ಟದಲ್ಲಿಯೇ ಗೊಬ್ಬರವನ್ನು ರೈತರಿಗೆ ವಿತರಿಸುವ ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ನಂತರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎನ್.ವಿ.ಅಂತರವಳ್ಳಿಯವರಿಗೆ ಮನವಿ ಪತ್ರ ಸಲ್ಲಿಸಿದರು.












Click it and Unblock the Notifications