ಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ

ಹಳ್ಳಿಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳಿಗಿಂತ ಮುಂಚೆ ಗೋವಿ(ಬಸವ)ಗೆ ಪೂಜೆ ಸಲ್ಲಿಸಿದ ನಂತರವಷ್ಟೆ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಇಷ್ಟೆಲ್ಲಾ ದೈವಿಕ ಭಾವನೆಯನ್ನ ಹೊಂದಿರುವ ಬಸವಗಳು ಗ್ರಾಮಗಳಲ್ಲಿ ಎಲ್ಲರ ಅಚ್ವುಮೆಚ್ಚಿನ ಪ್ರೀತಿಯ ಕುಟುಂಬದ ಸದಸ್ಯರಲ್ಲೊಂದಾಗಿರುತ್ತದೆ. ಗ್ರಾಮದ ಅಕ್ಕರೆಯ ಬಸವ ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಹತ್ತೂರಿನ ಸಾವಿರಾರು ಮಂದಿ ಸೇರಿ ಸಂಪ್ರದಾಯಬದ್ದವಾಗಿ ಅಂತ್ಯಸಂಸ್ಕಾರ ನಡೆಸುವುದರ ಮೂಲಕ ಚನ್ನಪಟ್ಟಣ ತಾಲ್ಲೂಕಿನ ಗುಡಿಸರಗೂರಿನ ಬಸವನ ಸಾವಿಗೆ ಮಾನವೀಯತೆಯ ಸ್ಪರ್ಷ ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗುಡಿಸರಗೂರಿನ ಬಸವೇಶ್ವರ ದೇವಾಲಯದಲ್ಲಿ ಕಳೆದ 10 ವರ್ಷಗಳಿಂದ ಬಸವನಾಗಿ ವಿಶೇಷ ಪೂಜೆ ಪಡೆದುಕೊಳ್ಳುತ್ತಿದ್ದ ಗೋವು ಜುಲೈ 25 ಭಾನುವಾರದಂದು ಅನಾರೋಗ್ಯದಿಂದ ಸಾವನ್ನಪ್ಪಿತು. ಸುತ್ತಮುತ್ತಲ ಹತ್ತೂರಿಗೆ ಜೀವಂತದೈವವಾಗಿದ್ದ ಬಸವನ ಅಕಾಲಿಕ ಮರಣದಿಂದ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿತ್ತು.
ಪ್ರಪಂಚ ನಿರ್ಮಾಣವಾದ ನಂತರ ರೈತರ ಹಿತರಕ್ಷಣೆಗಾಗಿ ದೈವಾನುದೇವತೆಗಳು ಅಕ್ಷಯತೃತೀಯದಿನದಂದು ಗೋವುಗಳನ್ನ ಸೃಷ್ಟಿ ಮಾಡಿದರೆಂಬ ಪ್ರತೀತಿಯಿದೆ. ವಿಶ್ವದಲ್ಲಿ ಎಲ್ಲಿ ಗೋವುಗಳನ್ನ ಪೂಜಿಸಿ ಆರಾಧಿಸುತ್ತಾರೋ ಅಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸುತ್ತದೆಂಬ ನಂಬಿಕೆ ಗ್ರಾಮಸ್ಥರಲ್ಲಂತೂ ದೃಢವಾಗಿದೆ. ಇಂಥ ಪೂಜನೀಯ ಪ್ರಾಣಿ ಸಾವನ್ನಪ್ಪಿದಾಗ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದ್ದು ಸಹಜ. ಬಸವನ ಸಾವಿಗೆ ಹತ್ತೂರಿನ ಗ್ರಾಮಸ್ಥರು ಸೇರಿ ಮಂತ್ರಘೋಷಗಳೊಂದಿಗೆ ಮೆರವಣಿಗೆ ನಡೆಸಿ ಪೂಜಾಕೈಂಕರ್ಯಗಳನ್ನ ನೆರವೇರಿಸಿ ಸಂಪ್ರದಾಯಬದ್ದವಾಗಿ ಶವಸಂಸ್ಕಾರ ನಡೆಸಿದರು. ಮಾನವನಿಗೆ ಗೌರವ ಕೊಡುವ ರೀತಿಯಲ್ಲೇ ಮೂಕಪ್ರಾಣಿ ಬಸವನಿಗೂ ಅರ್ಥಗರ್ಬಿತವಾಗಿ ಗೌರವ ಸಲ್ಲಿಸುವ ಮೂಲಕ ಭಕ್ತಿಯ ನೆಪದಲ್ಲಿ ಮಾನವೀಯತೆ ಮೆರೆದರು. ಗೋವುಗಳನ್ನ ಕಟುಕರ ಪಾಲು ಮಾಡುವ ಮಂದಿಗೆ ಈ ಗ್ರಾಮದ ಮಂದಿಯ ಭಕ್ತಿ ಮಾದರಿಯಾಗಿದೆ ಎಂದು ಶಟ್ಬ್ರಹ್ಮ ಜಗದೀಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಳೆದ 10 ವರ್ಷಗಳ ಹಿಂದೆ ಗುಡಿಸರಗೂರಿನ ಬಸವೇಶ್ವರ ದೇವಾಲಯ ಸ್ವಾಮಿಯ ಆರಾಧ್ಯದೈವವಾಗಿ ಒಂದು ಗೋವನ್ನ ಬಸವನನ್ನಾಗಿ ಸಂಪ್ರದಾಯಗಳೊಂದಿಗೆ ವಿವಿಧ ಮಠಾದೀಶರುಗಳ ಸಮಕ್ಷಮದಲ್ಲಿ ಪೂಜಾಕೈಂಕರ್ಯವನ್ನ ನೆರವೇರಿಸಿ ದೈವಸ್ಥಾನ ಕಲ್ಪಿಸಿದರು. ಅಂದಿನಿಂದ ಇಂದಿನವರೆಗೂ ನಿಜದೈವ ಬಸವನಿಗೆ ಗ್ರಾಮದ ಪ್ರತಿಕುಟುಂಬದ ಸದಸ್ಯರು ವಿಶೇಷ ಪೂಜೆಯನ್ನ ಸಲ್ಲಿಸುವ ಮೂಲಕ ವಿಶೇಷ ಅಕ್ಕರೆಯಿಟ್ಟಿದ್ದರು. ಗ್ರಾಮದಲ್ಲಿ ಏನೇ ಶುಭಕಾರ್ಯಗಳು ಮತ್ತು ದೇವತಾಕಾರ್ಯಗಳು ನಡೆಯಬೇಕಾದರೂ ಈ ಬಸವನಿಗೆ ಮೊದಲ ಪೂಜೆಸಲ್ಲುತ್ತಿತ್ತು.
ಬಸವನ ಪ್ರವೇಶದಿಂದ ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದ್ದು ಉತ್ಪ್ರೇಕ್ಷೆಯಲ್ಲ. ದೈವೀಭಾವನೆಯನ್ನ ಹೊಂದಿದ್ದ ಬಸವನ ಸಾವು ಗ್ರಾಮದಲ್ಲಿ ದುಃಖ ಮಡಗಟ್ಟುವಂತೆ ಮಾಡಿತ್ತು. ಭಕ್ತಿಯ ಪ್ರತೀಕವಾಗಿದ್ದ ಬಸವನ ಸಾವಿನ ನಂತರ ಮತ್ತೊಂದು ಗೋವನ್ನ ಗ್ರಾಮಸ್ಥರೆಲ್ಲರೂ ಸಲಹುವ ಮೂಲಕ ಸಾವಿಗೀಡಾದ ಅಕ್ಕರೆಯ ಬಸವನನ್ನ ಕಾಣುವುದಾಗಿ ಗ್ರಾಮಸ್ಥರೆಲ್ಲರು ಭಾವುಕರಾಗಿ ಹೇಳುತ್ತಾರೆ.
ಗುಡಿಸರಗೂರಿನ ಬಸವನ ಅಂತ್ಯಸಂಸ್ಕಾರ ಕ್ರಿಯೆ ಸುಮಾರು 5 ಗಂಟೆಗಳ ಕಾಲ ಸಾವಿರಾರು ಮಂದಿ ಭಕ್ತಸಮುದಾಯದ ಸಮ್ಮುಖದಲ್ಲಿ ನೆರವೇರಿತು. ಮಠಾದೀಶರುಗಳು ಮಂತ್ರೋಪದೇಶ ವಿಶೇಷ ಪೂಜೆ ನಡೆಸಿ ಸಂಪ್ರದಾಯದಂತೆ ಬಸವನಿಗೆ ವಿಶೇಷಗೌರವ ಸಲ್ಲಿಸಿದರು. ಸುಮಾರು 8 ಅಡಿ ಆಳ ಮತ್ತು 6 ಅಡಿ ಅಗಲದ ಗುಂಡಿ ತೆಗೆದು ಹೂವು ಅರಿಶಿನ ಕುಂಕುಮ ಮತ್ತು ವಿಭೂತಿಗಟ್ಟಿಗಳಿಂದ ಅಲಂಕೃತಗೊಳಿಸಿದ ಗುಂಡಿಯಲ್ಲಿ ಬಸವನ ದೇಹವನ್ನ ಇಟ್ಟು ಸಂಸ್ಕಾರ ನಡೆಸಲಾಯಿತು. ಮಾನವನಂತೆ ಮೂಕ ಪ್ರಾಣಿಗಳನ್ನ ಕಾಣಬೇಕೆಂಬ ಸಂದೇಶವನ್ನು ಸರಗೂರಿನ ಗ್ರಾಮಸ್ಥರು ಇಡೀ ಜಗತ್ತಿಗೆ ಸಾರಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications