ಸರದೇಶಪಾಂಡೆ ,ಮಯ್ಯಾಸ್ ರಂಗಾವಳಿ

ಬೆಂಗಳೂರು, ಜು. 27 : ರಂಗಕರ್ಮಿ ಯಶವಂತ ಸರದೇಶಪಾಂಡೆ ನೇತೃತ್ವದ ಗುರು ಸಂಸ್ಥೆಯು ನಗರದ ಮಯ್ಯಾಸ್ ರೆಸ್ಟೋರೆಂಟ್ ಸಹಯೋಗ ದಲ್ಲಿ ಮಯ್ಯಾಸ್ ರಂಗಾವಳಿ' ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ಆರು ತಿಂಗಳು ನಡೆಯಲಿರುವ ರಂಗಾವಳಿಯ ಪ್ರಥಮ ಪ್ರದರ್ಶನ ಆಗಸ್ಟ್ 1ರಂದು ಸಂಜೆ 6.30ಕ್ಕೆ ಜಯನಗರದ 7 ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್ ರಂಗಮಂದಿರದಲ್ಲಿ ನಡೆಯಲಿದೆ.

600 ನೇ ಪ್ರದರ್ಶನದತ್ತ ಮುನ್ನುಗ್ಗುತ್ತಿರುವ ಆಲ್ ದಿ ಬೆಸ್ಟ್' ನಾಟಕವನ್ನು ಪ್ರದರ್ಶಿಸಲಾಗುವುದು. ಆ.2 ರಂದು ಮಧ್ಯಾಹ್ನ 3.30
ಹಾಗೂ ಸಂಜೆ 7 ಕ್ಕೆ ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ ಎರಡು ಪ್ರದರ್ಶನ ನಡೆಯಲಿದೆ. ಮಧ್ಯಾಹ್ನದ ಪ್ರದರ್ಶನ ಹೊರತು ಪಡಿಸಿ, ನಾಟಕದ ಬಳಿಕ ಮಯ್ಯಾಸ್ ರೆಸ್ಟೋರೆಂಟ್‌ನಿಂದ ಪ್ರೇಕ್ಷಕರಿಗೆ ಊಟ ಏರ್ಪಡಿಸಲಾಗಿದೆ.

ಆಗಸ್ಟ್ ನಿಂದ 2010ರ ಫೆಬ್ರವರಿ ಅಂತ್ಯದವರೆಗೆ ನಾಟಕ ಪ್ರದರ್ಶಿಸಲಾಗುವುದು. ಆಲ್ ದಿ ಬೆಸ್ಟ್, ಸಹಿ ರೀ ಸಹಿ, ರಾಶಿಚಕ್ರ, ಓ ಲವ್ವೇ ಜೀವನ ಸಾಕ್ಷಾತ್ಕಾರ ನಾಟಕಗಳ ಪ್ರದರ್ಶನ ನಡೆಯಲಿದೆ. 100 ರೂ.ಪ್ರವೇಶ ಶುಲ್ಕ ನಿಗದಿಪಡಿಸ ಲಾಗಿದ್ದು, ಮಧ್ಯಾಹ್ನದ ಪ್ರದರ್ಶನಕ್ಕೆ 75 ರೂ.ಮಾತ್ರ'ಎಂದು ಗುರು ಸಂಸ್ಥೆ ನಿರ್ದೇಶಕ ಯಶವಂತ ಸರದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ನಗುವಿನ ಜತೆಗೆ ಆರೋಗ್ಯಕರ ಆಹಾರ ನೀಡುವ ಉದ್ದೇಶದಿಂದ ನಾಟಕ ರಂಗಾವಳಿ ಏರ್ಪಡಿಸಲಾಗಿದೆ'ಎಂದು ಮಯ್ಯಾಸ್ ರೆಸ್ಟೋರೆಂಟ್‌ನ ಮಾಲೀಕ
ಸದಾನಂದ ಮಯ್ಯ ತಿಳಿಸಿದರು. ಮಾಹಿತಿ ಹಾಗೂ ಟಿಕೆಟ್‌ಗೆ 9740115545, 9900793265.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+