ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರಸ್ತಾವನೆ ಬಂದರೆ ಶಾದಿ ಮಹಲ್ ನಿರ್ಮಾಣ : ಖಾನ್
ಗುರುವಾರ ಬಿಜೆಪಿಯ ನೆಹರೂ ಓಲೇಕಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಮಾನ್ಯವಾಗಿ ಗ್ರಾಮಗಳಲ್ಲಿ ಶಾದಿ ಮಹಲ್ ಗಳನ್ನು ನಿರ್ಮಿಸುವುದಿಲ್ಲ. ಒಂದು ವೇಳೆ ಯಾವುದೇ ಗ್ರಾಮಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಶಾದಿ ಮಹಲ್ ಗಳ ನಿರ್ಮಾಣಕ್ಕೆ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಇದಕ್ಕೊ ಮೊದಲು ಮಾತನಾಡಿದ ಶಾಸಕ ಓಲೇಕಾರ್, ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ ಹಾವೇರಿ ಪಟ್ಟಣವೂ ಸೇರಿದಂತೆ ಗುತ್ತಲ, ಹೊಸರಿತ್ತಿ, ಅಗಡಿ, ಹಾವನೂರು, ಹತ್ತಿಮತ್ತೂರು, ನಾಯಿಕೆರೂರು, ಯಲವಿಗಿ ಮತ್ತು ಕೊಳೋರು ಗ್ರಾಮಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ಸರಕಾರದ ಗಮನಕ್ಕೆ ತಂದರು. ಶಾದಿ ಮಹಲ್ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿಲ್ಲ. ಅರ್ಜಿ ಸಲ್ಲಿಸಿದರೆ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, July 24, 2009, 15:23 [IST]