ಇಂಟರ್ಸಿಟಿ : ವೇಳಾಪಟ್ಟಿ ನಿಗದಿಗೆ ರಾಘವೇಂದ್ರ ಒತ್ತಾಯ

ಈ ಕುರಿತು ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಪತ್ರ ಬರೆದಿರುವ ಸಂಸದರು, ವೇಳಾಪಟ್ಟಿಯನ್ನು ಶಿವಮೊಗ್ಗದಿಂದ ಬೆಳಿಗ್ಗೆ 6.30ಕ್ಕೆ ಇಂಟರ್ಸಿಟಿ ರೈಲು ಹೊರಟು ಬೆಳಿಗ್ಗೆ 11ಕ್ಕೆ ಬೆಂಗಳೂರು ತಲುಪಬೇಕು. ನಂತರ ಸಂಜೆ 4.30 ಅಥವಾ 5 ಘಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 9 ಅಥವಾ 9.30ಕ್ಕೆ ಶಿವಮೊಗ್ಗ ತಲುಪಬೇಕು ಎಂದು ಕೋರಿದ್ದಾರೆ. ಈ ಸಂಬಂಧ ಸೂಕ್ತ ನಿರ್ದೇಶನಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಶಿವಮೊಗ್ಗ- ಬೆಂಗಳೂರು ಇಂಟರ್ ಸಿಟಿ ರೈಲನ್ನು ಹೊಸದಾಗಿ ಮಂಜೂರು ಮಾಡಿದ್ದು, ಈ ಭಾಗದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಇದೀಗ ಕೇವಲ ನಾಲ್ಕೂವರೆ ತಾಸುಗಳಲ್ಲಿ ಶಿವಮೊಗ್ಗದಿಂದ ರಾಜಧಾನಿ ತಲುಪಬಹುದು ಮತ್ತು ಅಷ್ಟೇ ಸಮಯದಲ್ಲಿ ರಾಜಧಾನಿಯಿಂದ ಶಿವಮೊಗ್ಗ ತಲುಪಬಹುದಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications