Get Updates
Get notified of breaking news, exclusive insights, and must-see stories!

ಕಬಿನಿ ಸೇತುವೆ ಮೇಲೆ ಸಂಚಾರ ನಿಷೇಧ

ಮೈಸೂರು, ಜು. 21 : ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದ ಸಮೀಪ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲೆ ಜುಲೈ 20 ರಿಂದ ಆಗಸ್ಟ್ 19ರವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿ ಪಿ ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ.

ಈ ವಾಹನ ಸಂಚಾರದ ನಿರ್ಬಂಧದಿಂದ ವಾಹನ ಸಂಚಾರಕ್ಕೆ ಆಗುವ ತೊಂದರೆಯನ್ನು ಗಮನದಲ್ಲಿರಿಸಿಕೊಂಡು ಮೈಸೂರು ನಗರದಿಂದ ಕೊಳ್ಳೇಗಾಲಕ್ಕೆ ಟಿ ನರಸೀಪುರ ಮೂಲಕ ತೆರಳುವ ವಾಹನಗಳು ಮೈಸೂರು - ವರುಣಾ - ಮೇಗಳಾಪುರ - ಕುಪ್ಪೆಗಾಲ ಸೇತುವೆ - ಹುಣಸೂರು ಗ್ರಾಮದ ಮೂಲಕ ಟಿ ನರಸೀಪುರಕ್ಕೆ ಹಾಗೂ ಟಿ ನರಸೀಪುರದಿಮದ ಮೈಸೂರಿಗೆ ತೆರಳುವ ಬಸ್ಸುಗಳು ಮೈಸೂರು - ಬಿಳಿಕೆರೆ - ವರುಣಾ ಮಾರ್ಗವಾಗಿ ಮೈಸೂರಿಗೆ ಹಾಗೂ ಲಾರಿಗಳು ಮೈಸೂರಿನಿಂದ ಟಿ ನರಸೀಪುರಕ್ಕೆ ತೆರಳಲು ಮೈಸೂರು - ನಂಜನಗೂಡು - ಬಿಳಿಕೆರೆ - ಟಿ ನರಸೀಪುರ ಹಾಗೂ ಟಿ ನರಸೀಪುರದಿಂದ ಹೋಗುವ ಲಾರಿಗಳು ಟಿ ನರಸೀಪುರ - ಬಿಳಿಕೆರೆ - ನಂಜನಗೂಡು - ಮೈಸೂರು ಮಾರ್ಗವಾಗಿ ತೆರಳುವಂತೆ ತಮ್ಮ ಆದೇಶದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+