ಕಬಿನಿ ಸೇತುವೆ ಮೇಲೆ ಸಂಚಾರ ನಿಷೇಧ
ಮೈಸೂರು, ಜು. 21 : ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದ ಸಮೀಪ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲೆ ಜುಲೈ 20 ರಿಂದ ಆಗಸ್ಟ್ 19ರವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳೂ ಆದ ಜಿಲ್ಲಾ ದಂಡಾಧಿಕಾರಿ ಪಿ ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ.
ಈ ವಾಹನ ಸಂಚಾರದ ನಿರ್ಬಂಧದಿಂದ ವಾಹನ ಸಂಚಾರಕ್ಕೆ ಆಗುವ ತೊಂದರೆಯನ್ನು ಗಮನದಲ್ಲಿರಿಸಿಕೊಂಡು ಮೈಸೂರು ನಗರದಿಂದ ಕೊಳ್ಳೇಗಾಲಕ್ಕೆ ಟಿ ನರಸೀಪುರ ಮೂಲಕ ತೆರಳುವ ವಾಹನಗಳು ಮೈಸೂರು - ವರುಣಾ - ಮೇಗಳಾಪುರ - ಕುಪ್ಪೆಗಾಲ ಸೇತುವೆ - ಹುಣಸೂರು ಗ್ರಾಮದ ಮೂಲಕ ಟಿ ನರಸೀಪುರಕ್ಕೆ ಹಾಗೂ ಟಿ ನರಸೀಪುರದಿಮದ ಮೈಸೂರಿಗೆ ತೆರಳುವ ಬಸ್ಸುಗಳು ಮೈಸೂರು - ಬಿಳಿಕೆರೆ - ವರುಣಾ ಮಾರ್ಗವಾಗಿ ಮೈಸೂರಿಗೆ ಹಾಗೂ ಲಾರಿಗಳು ಮೈಸೂರಿನಿಂದ ಟಿ ನರಸೀಪುರಕ್ಕೆ ತೆರಳಲು ಮೈಸೂರು - ನಂಜನಗೂಡು - ಬಿಳಿಕೆರೆ - ಟಿ ನರಸೀಪುರ ಹಾಗೂ ಟಿ ನರಸೀಪುರದಿಂದ ಹೋಗುವ ಲಾರಿಗಳು ಟಿ ನರಸೀಪುರ - ಬಿಳಿಕೆರೆ - ನಂಜನಗೂಡು - ಮೈಸೂರು ಮಾರ್ಗವಾಗಿ ತೆರಳುವಂತೆ ತಮ್ಮ ಆದೇಶದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications