ಮಾಜಿ ಶಾಸಕ ಮಹಿಮಾ ಪಟೇಲ್ ಕಾಂಗ್ರೆಸ್ ಗೆ ?

ಸೋಮವಾರ ಇಲ್ಲಿ ಜೆ ಎಚ್ ಪಟೇಲ್ ಅಬಿಮಾನಿ ಬಳಗದ ಸಭೆಯಲ್ಲಿ ಮಾತನಾಡಿದ ಅವರು ತ್ಯಾಗ, ಬದ್ಧತೆಯ ಮುಖಂಡರಿರುವ ಕಾಂಗ್ರೆಸ್ ಕಡೆ ತಮ್ಮ ಮನಸೋತಿದೆ ಎಂದು ಮಹಿಮಾ ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಗೂ ಮುಂಚೆ ಸ್ವರ್ಣಯುಗ ಪಕ್ಷವನ್ನೇ ಮುಂದುವರೆಸಿಕೊಂಡು ಹೋಗಬೇಕೆಂಬ ಇಚ್ಚೆ ಇತ್ತು. ಆದರೆ, ತ್ಯಾಗದ ಮನೋಭಾವ ಕಾಂಗ್ರೆಸ್ ನಲ್ಲಿದೆ ಎಂದರು.
ಸೋನಿಯಾ ಗಾಂಧಿ ದೇಶದ ಪ್ರಧಾನಿ ಆಗುವ ಸುಯೋಗ ಎರಡು ಬಾರಿ ಬಂದಿತ್ತು. ಅವರ ಮಗ ರಾಹುಲ್ ಗಾಂಧಿ ಅವರೂ ಮಂತ್ರಿ ಸ್ಥಾನವನ್ನು ಬೇಡ ಎಂದಿದ್ದಾರೆ. ಇಂಥ, ತ್ಯಾಗ ಬದ್ದತೆಯ ಮನೋಭಾವವುಳ್ಳ ಮುಖಂಡರಿರುವ ಕಾಂಗ್ರೆಸ್ ಪಕ್ಷದ ಕಡೆ ಮನಸೋತಿದೆ ಎಂದು ತಮ್ಮ ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸೋಣ. ರಾಜ್ಯ ಮತ್ತು ದೇಶದ ರಾಜಕಾರಣ ಮಾಡುವ ಉದ್ದೇಶ ನನ್ನದಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹೋದರೆ ಆ ಪಕ್ಷದ ನಾಯಕರು ನನಗೆ ಟಿಕೆಟ್ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಮಹಿಮಾ ಪಟೇಲ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications