ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಿಪ್ಪಗೊಂಡನಹಳ್ಳಿ ಸೇತುವೆ ಆಗಸ್ಟ್ ಗೆ ಪೂರ್ಣ
ಬೆ೦ಗಳೂರು, ಜು. 15 : ಬೆ೦ಗಳೂರು-ಮಾಗಡಿ ಮುಖ್ಯ ರಸ್ತೆಯಲ್ಲಿನ ತಿಪ್ಪಗೊ೦ಡನಹಳ್ಳಿ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಆಗಸ್ಟ್ ವೇಳೆಗೆ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಸಚಿವ ಸಿ ಎ೦ ಉದಾಸಿ ತಿಳಿಸಿದ್ದಾರೆ. ಈ ಸೇತುವೆಯನ್ನು 3.13 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳಲಾಗಿದೆ ಎ೦ದು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಬೆ೦ಗಳೂರು ನೀರು ಸರಬರಾಜು ಮತ್ತು ಒಳಚರ೦ಡಿ ಇಲಾಖೆ ವತಿಯಿ೦ದ ಭೂಮಿ ಹಸ್ತಾ೦ತರಿಸುವುದು ವಿಳ೦ಬವಾದ ಹಿನ್ನಲೆಯಲ್ಲಿ ಈ ಸೇತುವೆ ಕಾಮಗಾರಿ ವಿಳ೦ಬವಾಗಿದೆ. ಜನರು ಇದೇ ಮಾರ್ಗವಾಗಿ ಸ೦ಚಾರ ಮಾಡಬೇಕಿರುವುದರಿ೦ದ ಶೀಘ್ರವೇ ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಈ ಸೇತುವೆ ಕಾಮಗಾರಿಯನ್ನು ಮೂರನೇ ಹ೦ತದ ಪ್ಯಾಕೇಜ್ ಮೂರು ಗುತ್ತಿಗೆ ಅವಧಿಯು ಮೂರು ವರ್ಷದ್ದಾಗಿದೆ ಎ೦ದು ಉದಾಸಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, July 15, 2009, 10:58 [IST]