Get Updates
Get notified of breaking news, exclusive insights, and must-see stories!

ವಿನಿವಿಂಕ್ ಶಾಸ್ತ್ರಿಗೆ ಸಿಕ್ತು ಮಧ್ಯಂತರ ಜಾಮೀನು

Viniv Inc Satry,
ನವದೆಹಲಿ, ಜು. 13 : ನೂರಾರು ಮಂದಿಯ ತಲೆ ಮೇಲೆ ಚಾಪೆ ಎಳೆದಿದ್ದ ಬಹುಕೋಟಿ ಹಗರಣ ರೂವಾರಿ ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಕೆ ಎನ್ ಶ್ರೀನಿವಾಸ್ ಶಾಸ್ತ್ರಿಗೆ ಸುಪ್ರಿಂಕೋರ್ಟ್ ನಿಂದ ಎರಡು ತಿಂಗಳ ಅವಧಿಗೆ ಮಧ್ಯಂತರ ಮುಕ್ತಿ ಸಿಕ್ಕಿದೆ.

ವಿನಿವಿಂಕ್ ಶಾಸ್ತ್ರಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ವಿಭಾಗೀಯಪೀಠ ಎರಡು ತಿಂಗಳ ಅವಧಿಗೆ ಜಾಮೀನು ಮಂಜೂರು ಮಾಡಿದೆ. ವಿನಿವಿಂಕ್ ಶಾಸ್ತ್ರೀ ಗ್ರಾಹಕರಿಂದ ಪಡೆದ ಹಣವನ್ನು ತನ್ನ ಸ್ಥಿರ ಮತ್ತು ಚರ ಆಸ್ತಿಗಳನ್ನು ಮಾರಾಟ ಮಾಡಿ ಸಾಲ ತಿರುಸುವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಶಾಸ್ತ್ರಿಗೆ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸ್ತ್ರಿ ಪರ ವಕೀಲ ಎಂ ಎಂ ನಾಣಯ್ಯ ಅವರು, ಶಾಸ್ತ್ರಿ ಅವರಿಗೆ ಎರಡು ತಿಂಗಳ ಮಧ್ಯಂತರ ಅವಧಿಯ ಜಾಮೀನು ದೊರೆತಿದೆ. ಶಾಸ್ತ್ರಿ ಬಳಿ ಅಪಾರ ಸ್ಥಿರ ಮತ್ತು ಚರ ಆಸ್ತಿ ಇದ್ದು, ಅವುಗಳನ್ನು ಮಾರಾಟ ಮಾಡಿ ಸಾಲ ತೀರಿಸಲಾಗುವುದು ಎಂದರು. 2005 ರಲ್ಲಿ ನಡೆದ ಘಟನೆ ಇದಾಗಿದ್ದು, ಸುಮಾರು 200 ಕೋಟಿ ರುಪಾಯಿಗಳನ್ನು ಶ್ರೀನಿವಾಸ್ ಶಾಸ್ತ್ರಿ ಗುಳುಂ ಅನಿಸಿದ್ದ. 20,184 ಮಂದಿ ಶಾಸ್ತ್ರಿ ಬಳಿ ಹಣ ಹೂಡಿದ್ದರು. ವಿನಿವಿಂಕ್ ಶಾಸ್ತ್ರಿ, ಕಂಪನಿ ಉಪಾಧ್ಯಕ್ಷ ಜಿ ಲೋಕೇಶ್ ಸೇರಿ 18 ಮಂದಿ ಮೇಲೆ ಪೊಲೀಸ್ ದೂಷಾರೋಪಣ ಪಟ್ಟಿ ಸಲ್ಲಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+