ಬೆಂಗಳೂರು ಜಾಣೆಯರಿಗೆ ಒಬಾಮಾ ಶಹಬ್ಬಾಸ್

ಇವಳ ಕಷ್ಟ ಕಾರ್ಪಣ್ಯಗಳು ನಾನಾ ಬಗೆ. ಸಂಸಾರ ಸಾಗರ ವರ್ಸ್ಸಸ್ ಪ್ರಾಜೆಕ್ಟ್ ಡೆಡ್ ಲೈನ್ಸ್. ಎಷ್ಟೋ ಮನೆಗಳಲ್ಲಿ "ಅವಳಿಗೆ 60 ಸಾವಿರ ಸಂಬಳ ಬರತ್ತಂತೆ ಇನ್ನೇನು ಬೇಕು" ಎಂದು ಕಾಮೆಂಟು ಹೊಡೀತಾರೇ ಹೊರತು ಎರಡು ತಿಂಗಳು ಸೆಬಾಟಿಕಲ್ ತೊಗೊಳೇ, ನಾನು ನೋಡ್ಕೋತೀನಿ ಎಂದು ಹೇಳುವ ಗಂಡ ಅಥವಾ ಅಣ್ಣತಮ್ಮಂದಿರು ಸಿಗುವುದು ವಿರಳ. ಕಡೆಯಪಕ್ಷ, ಅಯ್ಯೋ ಹೆಣ್ಣುಹೆಂಗಸು ಎಷ್ಟು ಕಷ್ಟ ಪಡ್ತಾಳೆ ನೋಡ್ರೀ ಎಂಬ ಮೆಚ್ಚುಗೆ ಮಾತುಗಳಿಗೂ ಬರಗಾಲ.
ಕರ್ನಾಟಕದ ಸಾಫ್ಟ್ ವೇರ್ ಮಹಿಳೆಯರ ಮಾನಸಿಕ ತುಮುಲಗಳು ಮನೆಯವರಿಗೆ ಅರ್ಥವಾಗದಿದ್ದರೂ ದೂರದ ಅಮೆರಿಕಾದಲ್ಲಿರುವ ಅಣ್ಣ ಒಬಾಮರಿಗೆ ಅದು ಹೇಗೋ ಗೊತ್ತಾಗಿಬಿಟ್ಟಿದೆ. ಮೊನ್ನೆ ಮಾಡಿದ ಒಂದು ಭಾಷಣದಲ್ಲಿ ಒಬಾಮಾ ಹೀಗೆ ಹೇಳಿದ್ದಾರೆ. "ಅಂತರ್ಜಾಲ ಸಂಪರ್ಕ ಹೊಂದಿರುವ ಬೆಂಗಳೂರಿನ ಓರ್ವ ಯುವತಿ ಇವತ್ತು ಜಗತ್ತಿನಲ್ಲಿ ಯಾರೊಂದಿಗೆ ಬೇಕಿದ್ದರೂ ಸಮರ್ಥವಾದ ಸ್ಪರ್ಧೆಗೆ ನಿಲ್ಲಬಲ್ಲಳು!"
ಜಾಗತಿಕ ಮಾರುಕಟ್ಟೆಯಲ್ಲಿ ಸಂಭವಿಸುತ್ತಿರುವ ಕಲ್ಲವಿಲ್ಲಗಳನ್ನು ಸೂಕ್ಷವಾಗಿ ಪ್ರಸ್ತಾಪಿಸಿದ ಅಮೆರಿಕಾದ ಅಧ್ಯಕ್ಷರು 'ಜಾಗರೂಕತೆಯನ್ನು ಗಾಳಿಗೆ ತೂರಿ ವ್ಯವಹಾರ ಮಾಡಿದರೆ, ನಿಯಂತ್ರಣವಿಲ್ಲದೆ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ' ಎಂದು ಎಚ್ಚರಿಸಿದರು. ನಡೆಯುವ ನೆಲದ ಮೇಲೆ ಕಣ್ಣಿಲ್ಲದಿದ್ದರೆ ಎಡಹುವುದು ತಪ್ಪುವುದಿಲ್ಲ. ಎಲ್ಲಿ ಹೆಜ್ಜೆ ಇಟ್ಟರೂ ಅಷ್ಟೆ, ಮಿಸ್ಸಿಸ್ಸಿಪ್ಪಿ ಆದರೂ ಅಷ್ಟೆ ಓಲ್ಗಾ ಆದರೂ ಅಷ್ಟೆ ಎಂದು ಮಾರ್ಮಿಕವಾಗಿ ನುಡಿದರು.
ಭಾರತ ಮತ್ತು ಚೀನದಂತಹ ರಾಷ್ಟ್ರಗಳು ಅಭಿವೃದ್ಧಿ ಹೊಂದಬೇಕು. ಅದರಿಂದ ಅಮೆರಿಕಾ ಹಾಗೂ ಪಶ್ಚಿಮ ದೇಶಗಳೂ ಅಭಿವೃದ್ಧಿಯಾಗುತ್ತವೆ. ಇಂಥ ಅಭಿವೃದ್ಧಿ ಚಕ್ರ ಸುತ್ತಲಾರಂಭಿಸಿದರೆ ಎಲ್ಲರಿಗೂ ಒಳಿತಾಗುವುದು ಎಂದು ಒಬಾಮಾ ಅಭಿಪ್ರಾಯಪಟ್ಟರು. ಭಾರತದಲ್ಲಿ ಸಂಪತ್ತು ಹೆಚ್ಚಾದರೆ ಅದು ಅಮೆರಿಕಾದ ಹೊಸ ಮಾರುಕಟ್ಟೆಯ ಬಾಗಿಲುಗಳನ್ನು ತೆರೆಯುತ್ತದೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
(ದಟ್ಸ್ ಕನ್ನಡ ವಾರ್ತೆ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications