ಸಲಿಂಗರತಿ : ಸುಪ್ರಿಂಕೋರ್ಟ್ ಮೆಟ್ಟಿಲೇರಿದ ಬಾಬಾ

ಕಳೆದ ವಾರ ದೆಹಲಿಯ ಹೈಕೋರ್ಟ್ ಸಲಿಂಗರತಿ ನಿಷೇಧದಿಂದ ವ್ಯಕ್ತಿಯ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ದೇಶದ ಪ್ರಜೆಗಳಿಗೆ ಸಮಾನತೆ ಹೊಂದಬೇಕು. ಈ ವಿಷಯದಲ್ಲಿ ತಾರತಮ್ಯವೇಕೆ ಎಂದು ಪ್ರಶ್ನಿಸಿ ಎಸ್ ಪಿ ಶಾ ನೇತೃತ್ವದ ಪೀಠ ಸಲಿಂಗರತಿ ಸಕ್ರಮ ಎಂದು ಘೋಷಿಸಿತ್ತು. ನ್ಯಾಯಾಲಯ ನೀಡಿದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದರಿಂದ ಸಮಾಜ ಇನ್ನಷ್ಟು ಅಧಃಪತನಕ್ಕೆ ಇಳಿಯಲಿದೆ ಎಂದು ಧಾರ್ಮಿಕ ಮುಖಂಡರು ವಿರೋಧಿಸಿದ್ದರು. ಇಂದು ಯೋಗಗುರು ರಾಮದೇವ್ ಅವರು ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications