ಬಜೆಟ್ ಉದ್ಯಮ ವಲಯದ ನಿರೀಕ್ಷೆಗೆ ಸ್ಪಂದಿಸಿಲ್ಲ ;ನಿರಾಣಿ
ಬೆಂಗಳೂರು, ಜು.04:ಕೇಂದ್ರ ಸರ್ಕಾರದ ನೂತನ ರೈಲ್ವೆ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ರಾಜ್ಯದ ಉದ್ಯಮ ವಲಯದ ನಿರೀಕ್ಷೆಗೆ ಸಂಪೂರ್ಣವಾಗಿ ಸ್ಪಂದಿಸುವಲ್ಲಿ ವಿಫಲವಾಗಿದೆ. ರಾಜ್ಯಕ್ಕೆ 7 ಹೊಸ ರೈಲು ಸಂಚಾರವನ್ನು ಪ್ರಕಟಿಸುವ ಮೂಲಕ ರಾಜ್ಯದ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಇಂಟರ್ಸಿಟಿ ರೈಲು ಸಂಚಾರವನ್ನು ಧಾರವಾಡದವರೆಗೆ ವಿಸ್ತರಿಸಿರುವುದು ಸ್ವಾಗತಾರ್ಹವಾಗಿದೆ. ಆಲಮಟ್ಟಿ-ಕೊಪ್ಪಳ ಹೊಸ ರೈಲು ಮಾರ್ಗದ ರಚನೆಗೆ ಸಮೀಕ್ಷೆ ಕಾರ್ಯವು ಆಶಾದಾಯಕವಾಗಿದ್ದು, ಅದು ಬೇಗ ಪೂರ್ಣಗೊಂಡು ಅನುಷ್ಠಾನಗೊಂಡರೆ ಆ ಭಾಗದ ವ್ಯಾಪಾರ-ವಹಿವಾಟು ಚಟುವಟಿಕೆಗೆ ಹೆಚ್ಚಿನ ನೆರವಾಗಲಿದೆ.
ಉತ್ತರ ಕರ್ನಾಟಕದ ಇನ್ನು ಹಲವು ರೈಲ್ವೆ ಯೋಜನೆಗಳಿಗೆ ಹೆಚ್ಚಿನ ನೆರವನ್ನು ನಿರೀಕ್ಷಿಸಲಾಗಿತ್ತು. ಆದರೆ ಪ್ರಮುಖ ಯೋಜನೆಗಳನ್ನು ಪ್ರಕಟಿಸದೆ ಮತ್ತೆ ನಿರಾಶೆಯನ್ನು ಮೂಡಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಂತರ್ ರಾಜ್ಯಗಳೊಂದಿಗೆ ಆಮದು-ರಫ್ತು ಚಟುವಟಿಕೆಗೆ ನೆರವಾಗುವ ವಿಶೇಷ ರೈಲು ಯೋಜನೆಗಳನ್ನು ಕರ್ನಾಟಕಕ್ಕೆ ತರುವಲ್ಲಿ ರಾಜ್ಯದ ಮಾನ್ಯ ಕೇಂದ್ರ ಸಚಿವರುಗಳು ಪ್ರಯತ್ನಿಸಲಿ. ಆ ನಿಟ್ಟಿನಲ್ಲಿ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ರಾಜ್ಯದ ಕೈಗಾರಿಕಾ ಸಂಘ ಸಂಸ್ಥೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೈಗಾರಿಕ ಸಚಿವರು ಹೇಳಿದರು.
(ದಟ್ಸ್ ಕನ್ನಡವಾರ್ತೆ)











Click it and Unblock the Notifications