ಬಜೆಟ್ ಉದ್ಯಮ ವಲಯದ ನಿರೀಕ್ಷೆಗೆ ಸ್ಪಂದಿಸಿಲ್ಲ ;ನಿರಾಣಿ

ಬೆಂಗಳೂರು, ಜು.04:ಕೇಂದ್ರ ಸರ್ಕಾರದ ನೂತನ ರೈಲ್ವೆ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ರಾಜ್ಯದ ಉದ್ಯಮ ವಲಯದ ನಿರೀಕ್ಷೆಗೆ ಸಂಪೂರ್ಣವಾಗಿ ಸ್ಪಂದಿಸುವಲ್ಲಿ ವಿಫಲವಾಗಿದೆ. ರಾಜ್ಯಕ್ಕೆ 7 ಹೊಸ ರೈಲು ಸಂಚಾರವನ್ನು ಪ್ರಕಟಿಸುವ ಮೂಲಕ ರಾಜ್ಯದ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಇಂಟರ್‌ಸಿಟಿ ರೈಲು ಸಂಚಾರವನ್ನು ಧಾರವಾಡದವರೆಗೆ ವಿಸ್ತರಿಸಿರುವುದು ಸ್ವಾಗತಾರ್ಹವಾಗಿದೆ. ಆಲಮಟ್ಟಿ-ಕೊಪ್ಪಳ ಹೊಸ ರೈಲು ಮಾರ್ಗದ ರಚನೆಗೆ ಸಮೀಕ್ಷೆ ಕಾರ್ಯವು ಆಶಾದಾಯಕವಾಗಿದ್ದು, ಅದು ಬೇಗ ಪೂರ್ಣಗೊಂಡು ಅನುಷ್ಠಾನಗೊಂಡರೆ ಆ ಭಾಗದ ವ್ಯಾಪಾರ-ವಹಿವಾಟು ಚಟುವಟಿಕೆಗೆ ಹೆಚ್ಚಿನ ನೆರವಾಗಲಿದೆ.

ಉತ್ತರ ಕರ್ನಾಟಕದ ಇನ್ನು ಹಲವು ರೈಲ್ವೆ ಯೋಜನೆಗಳಿಗೆ ಹೆಚ್ಚಿನ ನೆರವನ್ನು ನಿರೀಕ್ಷಿಸಲಾಗಿತ್ತು. ಆದರೆ ಪ್ರಮುಖ ಯೋಜನೆಗಳನ್ನು ಪ್ರಕಟಿಸದೆ ಮತ್ತೆ ನಿರಾಶೆಯನ್ನು ಮೂಡಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಂತರ್ ರಾಜ್ಯಗಳೊಂದಿಗೆ ಆಮದು-ರಫ್ತು ಚಟುವಟಿಕೆಗೆ ನೆರವಾಗುವ ವಿಶೇಷ ರೈಲು ಯೋಜನೆಗಳನ್ನು ಕರ್ನಾಟಕಕ್ಕೆ ತರುವಲ್ಲಿ ರಾಜ್ಯದ ಮಾನ್ಯ ಕೇಂದ್ರ ಸಚಿವರುಗಳು ಪ್ರಯತ್ನಿಸಲಿ. ಆ ನಿಟ್ಟಿನಲ್ಲಿ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ರಾಜ್ಯದ ಕೈಗಾರಿಕಾ ಸಂಘ ಸಂಸ್ಥೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೈಗಾರಿಕ ಸಚಿವರು ಹೇಳಿದರು.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+