ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗರತಿ ಸಕ್ರಮ ಸರಿಯಲ್ಲ : ಜನಾರ್ದನಸ್ವಾಮಿ

By Staff
|
Google Oneindia Kannada News

Janardhan Swamy
ನವದೆಹಲಿ, ಜು. 2 : ಸಲಿಂಗಕಾಮ ಸಕ್ರಮ ಎಂದು ದೆಹಲಿಯ ಹೈಕೋರ್ಟ್ ತೀರ್ಪು ನೀಡಿದ ನಂತರ ನ್ಯಾಯಾಲಯದ ಆದೇಶದ ಪರ ವಿರೋಧಗಳು ವ್ಯಕ್ತವಾಗತೊಡಗಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗದ ಬಿಜೆಪಿ ಸಂಸದ ಜನಾರ್ದನಸ್ವಾಮಿ ಅವರು ನಿಸರ್ಗಕ್ಕೆ ವಿರುದ್ಧವಾಗಿರುವ ಸಲಿಂಗರತಿಯಿಂದಾಗಿ ಸಮಾಜದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ಅಮೆರಿಕದಂತ ಲೈಂಗಿಕ ಮುಕ್ತ ದೇಶದಲ್ಲಿ ಇದರ ಬಗ್ಗೆ ಪರ ವಿರೋಧವಿದೆ. ಇಂತಹ ಸಂದರ್ಭದಲ್ಲಿ ಭಾರತದಂತಹ ಸಂಪ್ರದಾಯವುಳ್ಳ ದೇಶದಲ್ಲಿ ಸಲಿಂಗಕಾಮ ಸಕ್ರಮ ಮಾಡಿರುವುದು ಸಮಾಜ ಮೇಲೆ ಭಾರಿ ದುಷ್ಪರಿಣಾಮ ಬೀರುವುದು ಖಂಡಿತ ಎಂದು ಅವರು ಹೇಳಿದರು.

ಸಲಿಂಗಿಗಳಿಗೆ ಸಮಾನತೆ ನೀಡುವುದು ತಪ್ಪಲ್ಲ. ಅದು ಸಮಾಜದ ಒಳಿತಿಗೆ ಪೂರಕವಾಗಿರಬೇಕು. ಸಮಾಜದ ಚೌಕಟ್ಟು ಮೀರಿದರೆ ಅದರಿಂದ ಭಾರಿ ನಷ್ಟವಂತೂ ಕಟ್ಟಿಟ್ಟ ಬುತ್ತಿ ಎಂದು ಜನಾರ್ದನಸ್ವಾಮಿ ಹೇಳಿದರು. ಒಟ್ಟಿನಲ್ಲಿ ಸಲಿಂಗರತಿ ಸಕ್ರಮ ಮಾಡಿರುವುದು ಒಪ್ಪುವ ಬೆಳವಣಿಗೆಯಂತೂ ಅಲ್ಲವೇ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X