2011ರ ಜನಗಣತಿಗೆ ಪೂರ್ವಸಿದ್ದತಾ ಪರೀಕ್ಷೆ

ಚಿಕ್ಕಮಗಳೂರು, ಜೂ. 27 : ಭಾರತದ ಜನಗಣತಿ 2011ರ ಪೂರ್ವಬಾವಿ ಸಿದ್ದತೆಗಳಲ್ಲಿ ಒಂದಾದ ಪೂರ್ವಸಿದ್ದತಾ ಪರೀಕ್ಷೆಯನ್ನು ದೇಶದಾದ್ಯಂತ ಜೂನ್ 28ರಿಂದ ಕೈಗೊಳ್ಳಲಾಗುವುದು. ಕರ್ನಾಟಕ ರಾಜ್ಯದಲ್ಲಿನ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತೂಬಿನಕೆರೆ, ಬಿಟ್ಟೇನಹಳ್ಳಿ, ತಿಮ್ಲಾಪುರ ಮತ್ತು ಬಿ.ಟಿ.ಮಲ್ಲೇನಹಳ್ಳಿ ಗ್ರಾಮಗಳಲ್ಲಿ ಭಾರತದ ಜನಗಣತಿ 2011ರ ಪೂರ್ವ ಸಿದ್ದತಾ ಪರೀಕ್ಷೆಯನ್ನು ಕೈಗೊಳ್ಳಲಾಗುವುದು.

ಪೂರ್ವಸಿದ್ದತಾ ಪರೀಕ್ಷೆಯ ಮೊದಲ ಹಂತದಲ್ಲಿ ಅಂದರೆ ಜೂನ್ 28 ರಿಂದ ಜುಲೈ 5, 2009ರ ಅವಧಿಯಲ್ಲಿ ನಿವೇಶನ ನಕ್ಷೆ ತಯಾರಿಕೆ, ಕಟ್ಟಡ, ಜನಗಣತಿ ಮನೆಗಳಿಗೆ ಸಂಖ್ಯೆ ನೀಡುವುದು, ಮನೆ ಪಟ್ಟಿ ಮತ್ತು ಮನೆ ಗಣತಿಯನ್ನು ಕೈಗೊಳ್ಳಲಾಗುವುದು. ಎರಡನೆ ಹಂತವಾಗಿ ಜನ (ಸಂಖ್ಯಾ) ಗಣತಿಯನ್ನು ಜುಲೈ 11ರಿಂದ ಆಗಸ್ಟ್ 5, 2009ರ ಅವಧಿಯಲ್ಲಿ ಮತ್ತು ಮೂರನೆಯ ಮತ್ತು ಕೊನೆಯ ಹಂತವಾಗಿ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ ತಯಾರಿಕೆಯನ್ನು ಆಗಸ್ಟ್ 8ರಿಂದ 17ರ ನಡುವೆ ನಡೆಸಲಾಗುವುದು. ಭಾರತದ ಜನಗಣತಿ 2011ರ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಜನಗಣತಿ ಇಲಾಖೆ ಉಪನಿರ್ದೇಶಕ ಎಸ್.ಡಿ.ಭೈಸಾರೆ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+