ಇಂದಿನಿಂದ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಆರಂಭ
ಬೆಂಗಳೂರು, ಜೂ. 26 : ಮಳೆ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು ಬರಿದಾಗಿರುವುದು ಮತ್ತು ಕೇಂದ್ರ ಗ್ರೀಡ್ ನಿಂದ ನಿಯಮಿತವಾಗಿ ವಿದ್ಯುತ್ ಪೂರೈಕೆ ಆಗದಿರುವುದರಿಂದ ರಾಜ್ಯಾದ್ಯಂತ ಇಂದಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿಗೆ ಬರಲಿದೆ. ಆದರೆ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಲೋಡ್ ಶೆಡ್ಡಿಂಗ್ ಕ್ರಮವನ್ನು ತಳ್ಳಿಹಾಕಿದ್ದಾರೆ.
ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರದಿಂದಲೇ ಅನಿಮಿತ ಲೋಡ್ ಶೆಡ್ಡಿಂಗ್ ಜಾರಿಗೆ ಬಂದಿದ್ದು, ಇದನ್ನು ಶುಕ್ರವಾರದಿಂದ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೆಪಿಟಿಸಿಎಲ್ ಉನ್ನತ ಮೂಲಗಳು ತಿಳಿಸಿವೆ.
ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿ ನೀರಕಿನ ಪ್ರಮಾಣ ತೀರಾ ಕುಸಿದಿದೆ. ಕೇಂದ್ರ ಗ್ರೀಡ್ ನಿಂದ ಬರಬೇಕಾಗಿದ್ದ 1543 ಮೆಹಾವ್ಯಾಟ್ ವಿದ್ಯುತ್ ಗಿಂತ ಕಡಿಮೆ ವಿದ್ಯುತ್ ರಾಜ್ಯಕ್ಕೆ ಬರುತ್ತಿದೆ. ಇದರ ಜತೆಗೆ ರಾಮಗುಂಡಂನಿಂದ ಬರಬೇಕಿದ್ದ 135 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)