ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡಕೂಲಿಕಾರರ ಜೀವಕ್ಕೆ ಕುತ್ತಾದ ಬರಗಾಲ

By Staff
|
Google Oneindia Kannada News

ನವದೆಹಲಿ, ಜೂ. 26 : ಭಾರತದಲ್ಲಿ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆ ಆಗಲಿದೆ ಎನ್ನುವುದು ರೈತ ಹಾಗೂ ಕೂಲಿಕಾರ ಸಮುದಾಯಕ್ಕೆ ಬರಸಿಡಿಲಿನಂತಾಗಿದೆ. ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಕೈಹೊತ್ತು ಕುಳಿತಿದ್ದಾರೆ.

ದೇಶದಲ್ಲಿ 1.1 ಬಿಲಿಯನ್ ಭಾರತೀಯ ಜನಸಂಖ್ಯೆಯಲ್ಲಿ ಕೂಲಿ ಕೆಲಸ ಮಾಡಿಯೇ ಹೊಟ್ಟೆ ಹೊರೆಯುವ ಮಂದಿ ಸುಮಾರು ಶೇ. 60 ರಷ್ಟು ಇದ್ದಾರೆ. ಮಳೆ ಬರದಿದ್ದರೆ ಹೊಟ್ಟೆಹೊರೆಯುವುದು ಹೇಗೆ ಎಂಬುದನ್ನು ನನೆಸಿಕೊಂಡೆ ಅವರ ಧರೆಗಿಳಿದು ಹೋಗಿದ್ದಾರೆ. ಗಂಡ ಸತ್ತು ಅನೇಕ ವರ್ಷಗಳಾಗಿವೆ. ಐದು ಮಕ್ಕಳ ಹೊಟ್ಟೆಯನ್ನು ಕೂಲಿ ಮಾಡಿಯೇ ಹೊರೆಯಬೇಕು. ಮಳೆ ಬರದಿದ್ದರೆ ನಮ್ಮನ್ನು ಯಾರು ಕೂಲಿ ಕೆಲಸಕ್ಕೆ ಕರೆಯುವುದಿಲ್ಲ.

ಹಾಗಾದರೆ ನಾವು ಜೀವನ ಹೇಗೆ ಸಾಗಿಸಬೇಕು ಎಂದು ಪ್ರಶ್ನಿಸುತ್ತಾರೆ ಪಂಜಾಬಿನ ಬುಡಕಟ್ಟು ಜನಾಂಗದ ಮಹಿಳೆ ಪಿಸ್ತಾ ದೇವಿ. ಇದು ಒಬ್ಬ ಪಿಸ್ತಾ ದೇವಿಯ ಕತೆಯಲ್ಲಿ ಭಾರತದ ಉದ್ದಗಲಕ್ಕೂ ಇಂತಹ ಲಕ್ಷಾಂತರ ಪಿಸ್ತಾದೇವಿಗಳಿದ್ದಾರೆ. ಅವರ ಜೀವನ ಪಾಡೇನು. ಬರಗಾಲ ಎಂಬುದು ಭಾರತ ಸರಕಾರಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಸಿಎನ್ಎನ್ ಅಂತಾರಾಷ್ಟ್ರೀಯ ವಾಹಿನಿ ವರದಿ ಮಾಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X