ಸಲಿಂಗಕಾಮಿಗಳ ವಿಶೇಷ ಹಬ್ಬಕ್ಕೆ ಬೆಂಗಳೂರು ಸಿಂಗಾರ

ಸಮಾಜ ಏನೆನ್ನುತ್ತದೋ ಎಂಬ ಹೆದರಿಕೆಯ ಗೂಡಿನಿಂದ ಹೊರಬಂದು ತಮಗೂ ಸಮಾಜದಲ್ಲಿ ತಲೆಯೆತ್ತಿ ಜೀವಿಸಲು ಅವಕಾಶ ಕೊಡಿ ಎಂದು ಕೂಗಿ ಹೇಳಲು ಸಲಿಂಗಕಾಮಿಗಳು, ದ್ವಿಲಿಂಗಕಾಮಿ, ಖೋಜಾಗಳು, ಲೈಂಗಿಕ ಅಲ್ಪಸಂಖ್ಯಾತರು ಬೆಂಗಳೂರಿನಲ್ಲಿ ವಿಶೇಷ ಹಬ್ಬಕ್ಕೆ ಸದ್ದಿಲ್ಲದೆ ಸಜ್ಜಾಗುತ್ತಿದ್ದಾರೆ.
ಜೂನ್ 21 (ಭಾನುವಾರ)ದಿಂದ ಆರಂಭವಾಗಲಿರುವ ಸಲಿಂಗಕಾಮಿಗಳ ಹಬ್ಬ ಜೂನ್ 28ರವರೆಗೆ ಒಂದು ವಾರ ಅದ್ಧೂರಿಯಿಂದ ಜರುಗಲಿದೆ. ಹಬ್ಬದ ಕೊನೆಯಲ್ಲಿ ಸಲಿಂಗಕಾಮಿಗಳು, ಖೋಜಾಗಳು, ಲೈಂಗಿಕ ಅಲ್ಪಸಂಖ್ಯಾತರು ನಗರದಾದ್ಯಂತ ಮೆರವಣಿಗೆ ನಡೆಸಲಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕುವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಈ ಹಬ್ಬ ಇಲ್ಲಿ ನಡೆಯುತ್ತಿರುವುದು ಎರಡನೇ ಬಾರಿ. ಈ ಬಾರಿ ಯಶಸ್ವಿಯಾದರೆ ದೆಹಲಿ, ಕೊಲ್ಕತಾ, ಚೆನ್ನೈ ಮತ್ತು ಭುವನೇಶ್ವರಗಳಲ್ಲಿ ಕೂಡ ಹಬ್ಬ ನಡೆಸುವ ಉದ್ದೇಶವನ್ನು ಆಯೋಜಕರು ಇಟ್ಟುಕೊಂಡಿದ್ದಾರೆ. ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ (CSMR) ಈ ಹಬ್ಬವನ್ನು ಆಯೋಜಿಸಿದೆ. ಕಳೆದ ವರ್ಷ ಮೆರವಣಿಗೆಯಲ್ಲಿ 600 ಜನರು ಭಾಗವಹಿಸಿದ್ದರೆ ಈ ಬಾರಿ 1500 ಜನ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಸದಸ್ಯ ಸಿದ್ದಾರ್ಥ್ ನರೇನ್ ಹೇಳಿದ್ದಾರೆ.
ಸಲಿಂಗಕಾಮಿಗಳು ಮತ್ತು ಲೈಂಗಿಕ ಕಾರ್ಯಕರ್ತರ ನಡುವೆ ಕ್ರಿಕೆಟ್ ಪಂದ್ಯ, ವಿಚಾರ ಸಂಕಿರಣ, ಚಿತ್ರ ಪ್ರದರ್ಶನ, ನಾಟಕ, ನೃತ್ಯ, ಕಥೆ ಹೇಳುವುದು ಮತ್ತು, ಧರ್ಮ ಹಾಗು ಲೈಂಗಿಕತೆ ಕುರಿತಂತೆ ಉಪನ್ಯಾಸಗಳು ನಗರದಾದ್ಯಂತ ನಡೆಯಲಿವೆ. ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಪ್ರಾರಂಭವಾಗುವ ಮೆರವಣಿಗೆ ಸಜ್ಜನ್ ರಾವ್ ವೃತ್ತ, ಮಿನರ್ವಾ ವೃತ್ತ, ಜೆಸಿ ರಸ್ತೆ ಮುಖಾಂತರ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಕೊನೆಯಾಗಲಿದೆ.
(ಏಜೆನ್ಸೀಸ್)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications