ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿ, ಈಶ್ವರಪ್ಪ ಎಚ್ಚರಿಕೆ ನೀಡಿದ ಧನಂಜಯಕುಮಾರ್
ರಾಜ್ಯದ ಸರಕಾದ ದೆಹಲಿ ಪ್ರತಿನಿಧಿಯಾಗಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಜೈಟ್ಲೀ ಆಗಮಿಸುವ ಅವಶ್ಯಕತೆ ಉದ್ಭವಿಸಿಲ್ಲ. ಒಂದು ವೇಳೆ ಸಣ್ಣ ಪುಟ್ಟ ಅಭಿಪ್ರಾಯ ಭೇದವಿದ್ದಲ್ಲಿ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹಾಗಬ ರೆಡ್ಡಿ ನೇತೃತ್ವದಲ್ಲಿ ಎರಡು ಬಣಗಳು ಕಾರ್ಯ ನಿರ್ವಹಿಸುತ್ತಿವೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ರೆಡ್ಡಿ ಸಹೋದರರು ಮುಖ್ಯಮಂತ್ರಿಗೆ ಗಡುವು ನೀಡಿದ್ದಾರೆ ಎಂಬುದನ್ನು ಅಲ್ಲಗೆಳೆದ ಅವರು, ಸರಕಾರದಲ್ಲಿ ಮುಖ್ಯಮಂತ್ರಿ ನಿರ್ಧಾರ ಅಂತಿಮ. ಅವರಿಗೆ ಯಾರೂ ಗಡುವು ಅಥವಾ ಷರತ್ತು ವಿಧಿಸುವ ಪ್ರಶ್ನೆಯಿಲ್ಲ. ಒಂದು ವೇಳೆ ಯಾರಾದರೂ ಅಂತಹ ಅತಿರೇಕದ ವರ್ತನೆ ತೋರಿದಲ್ಲಿ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಧನಂಜಯಕುಮಾರ್ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ ಜನಾರ್ದನ ರೆಡ್ಡಿ ಭಿನ್ನಮತ ks eshwarappa ಕೆಎಸ್ ಈಶ್ವರಪ್ಪ dissidence ಧನಂಜಯ ಕುಮಾರ್ janardhana reddy
Story first published: Thursday, June 11, 2009, 10:46 [IST]