ನಕ್ಸಲ್ ದಾಳಿ : 11 ಸೇನಾ ಸಿಬ್ಬಂದಿ ಸಾವು
ಜಮ್ ಶೆಡ್ ಪುರ್, ಜೂ. 10 : ಜಾರ್ಖಂಡ್ ನಲ್ಲಿ ನಕ್ಸಲರ ಹಾವಳಿ ಮುಂದುವರಿದಿದ್ದು, ಪೋಲಿಸ್ ಮತ್ತು ಕೇಂದ್ರ ಮೀಸಲು ಪಡೆಯ ಜವಾನರನ್ನು ಕರೆದೊಯ್ಯುತ್ತಿದ್ದ ಟ್ರಕ್ ಮೇಲೆ ನಡೆದ ನೆಲಬಾಂಬ್ ಸ್ಪೋಟದಲ್ಲಿ 11 ಮಂದಿ ಜವಾನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇತರ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಜ್ಯದ ದಕ್ಷಿಣ ಸಿನಭಹು೦ ಜಿಲ್ಲೆಯ ಅರುಣಾಗ ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಈ ಎಲ್ಲಾ ಜವಾನರು ಸಾರಣದ ಅರಣ್ಯದಲ್ಲಿ ರಾಜ್ಯ ಪೋಲಿಸ್ ಪಡೆ ಮತ್ತು ಕೇಂದ್ರ ಮೀಸಲು ಪಡೆ ಜಂಟಿ ತಾಲೀಮು ನಡೆಸಿ ಹಿಂದಿರುಗುತ್ತಿದ್ದರು ಎಂದು ರಾಜ್ಯದ ಪೋಲಿಸ್ ಮಹಾನಿರ್ದೇಶಕ ವಿ ಡಿ ರಾಮ್ ತಿಳಿಸಿದ್ದಾರೆ. ಸಹಾಯಕ ಪೋಲಿಸ್ ನಿರ್ದೇಶಕ ಮತ್ತು ಪ್ಯಾರ ಮಿಲಿಟರಿ ಪಡೆಯನ್ನು ಘಟನಾ ಪ್ರದೇಶಕ್ಕೆ ಕಳುಹಿಸಲಾಗಿದೆ.
(ಏಜನ್ಸೀಸ್)












Click it and Unblock the Notifications