ಆಪರೇಷನ್ ಅಭಿಷೇಕ್ ಆರಂಭ
ಬೆಂಗಳೂರು, ಜೂ. 9 : ಮೋರಿಯಲ್ಲಿ ಕೊಚ್ಚಿ ಹೋದ ಲಿಂಗರಾಜಪುರದ ಅಭಿಷೇಕ್ ಬಾಲಕನ ದೇಹ ಪತ್ತೆಗೆ ಎಂಇಜಿ (ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ) ಸಮ್ಮತಿ ಸೂಚಿಸಿದ್ದು, ಪರಿಣತರ ತಂಡ ಇಂದಿನಿಂದ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ಆರಂಭಿಸಲಿದೆ.
ಸೋಮವಾರ ಬಿಬಿಎಂಪಿ ಅಧಿಕಾರಿಗಳು, ಮಿಲಿಟರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಯಾವ ರೀತಿ ಕಾರ್ಯಾಚರಣೆ ನಡೆಸಬೇಕೆನ್ನುವ ಬಗ್ಗೆ ಕಾರ್ಯತಂತ್ರ ರೂಪಿಸಿದ್ದಾರೆ. ಈ ಕಾರ್ಯಾಚರಣೆಗೆ 60 ಮಂದಿಯ ಪರಿಣತರ ತಂಡ ಬಳಕೆ ಮಾಡಲಾಗುತ್ತದೆ ಎಂದು ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ. ಮಿಲಿಟರಿ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ಬಿಬಿಎಂಪಿ ಎಂಜಿನಿಯರ್ ಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications