ಕುಲಕರ್ಣಿ ಹೇಳಿಕೆಗೆ ಸುಷ್ಮಾ ತೀವ್ರ ಆಕ್ಷೇಪ

Sushma Swaraj
ನವದೆಹಲಿ, ಜೂ. 9 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವೈಫಲ್ಯ ಕುರಿತು ಅಡ್ವಾಣಿ ಆಪ್ತ ಸಹಾಯಕ ಸುಧೀಂದ್ರ ಕುಲಕರ್ಣಿ ಅವರು ಮಾಡಿದ್ದ ವಿಶ್ಲೇಷಣೆಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಅಡ್ವಾಣಿಗೆ ಕೂಡಾ ಇದಕ್ಕೆ ಸಹಮತ ನೀಡಿಲ್ಲ. ಅಡ್ವಾಣಿ ಅವರನ್ನು ಕೇಂದ್ರವನ್ನಾಗಿಟ್ಟುಕೊಂಡು ಮಾಡಿದ್ದ ವ್ಯಾಖ್ಯಾನಕ್ಕೆ ಪ್ರತಿಕ್ರಿಯಿಸಿರುವ ಆರ್ಎಸ್ಎಸ್, ಕುಲಕರ್ಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇದು ಸೂಕ್ತ ಕಾಲವಲ್ಲ. ಇಲ್ಲದೇ ಸರಿಯಾದ ಪದ್ದತಿಯೂ ಅಲ್ಲ ಎಂದು ಹೇಳಿದೆ.

ಸುಧೀಂದ್ರ ಕುಲಕರ್ಣಿ ಲೇಖನದಲ್ಲಿನ ವಿಚಾರಗಳನ್ನು ಅಡ್ವಾಣಿ ಜೊತೆ ಚರ್ಚಿಸಿದ್ದೇವೆ. ಅವರು ಕುಲಕರ್ಣಿ ವಿಚಾರವನ್ನು ಒಪ್ಪಿಲ್ಲ. ಈ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು. ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರ ಬಗ್ಗೆ ಟೀಕೆಗಳನ್ನು ಒಳಗೊಂಡ ಇಂಥ ಲೇಖನವನ್ನು ಬರೆದಿದ್ದು ಏಕೆ ಎಂದು ಕುಲಕರ್ಣಿ ಅವರನ್ನು ಅಡ್ವಾಣಿ ಪ್ರಶ್ನಿಸಿದ್ದಾರೆ. ಆದರೆ, ಕುಲಕರ್ಣಿ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸುಷ್ಮಾ ಹೇಳಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+