ಕುಲಕರ್ಣಿ ಹೇಳಿಕೆಗೆ ಸುಷ್ಮಾ ತೀವ್ರ ಆಕ್ಷೇಪ

ಸುಧೀಂದ್ರ ಕುಲಕರ್ಣಿ ಲೇಖನದಲ್ಲಿನ ವಿಚಾರಗಳನ್ನು ಅಡ್ವಾಣಿ ಜೊತೆ ಚರ್ಚಿಸಿದ್ದೇವೆ. ಅವರು ಕುಲಕರ್ಣಿ ವಿಚಾರವನ್ನು ಒಪ್ಪಿಲ್ಲ. ಈ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು. ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರ ಬಗ್ಗೆ ಟೀಕೆಗಳನ್ನು ಒಳಗೊಂಡ ಇಂಥ ಲೇಖನವನ್ನು ಬರೆದಿದ್ದು ಏಕೆ ಎಂದು ಕುಲಕರ್ಣಿ ಅವರನ್ನು ಅಡ್ವಾಣಿ ಪ್ರಶ್ನಿಸಿದ್ದಾರೆ. ಆದರೆ, ಕುಲಕರ್ಣಿ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸುಷ್ಮಾ ಹೇಳಿದ್ದಾರೆ.
(ಏಜನ್ಸೀಸ್)












Click it and Unblock the Notifications