ಉಗ್ರರ ವಿರುದ್ಧ ಕಠಿಣ ಕ್ರಮ : ಮನಮೋಹನ್ ಸಿಂಗ್

Manmohan Singh
ನವದೆಹಲಿ, ಜೂ. 9 : ಭಯೋತ್ಪಾದನೆಗೆ ಸಂಬಂಧಿಸಿದಂತೆ ಕಠಿಣ ನಿಲುವನ್ನು ಪಾಕಿಸ್ತಾನಕ್ಕೆ ರವಾನಿಸಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಭಾರತದ ನೆಲೆದಲ್ಲಿ ಸಂಘಟಿತ ಭಯೋತ್ಪಾದನೆ ಕೃತ್ಯ ಎಸಗಿ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅವರು ತಾಕೀತು ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದ್ದು, ದೇಶದ್ರೋಹಿಗಳ ವಿರುದ್ಧ ಹೋರಾಟ ನಿರಂತರ ಎಂದು ಸಿಂಗ್ ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿಂದು ಪ್ರಥಮ ಅಧಿವೇಶನದಲ್ಲಿ ಉಭಯ ಸದನವನ್ನುದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆ ಹತ್ತಿಕ್ಕುವ ಸಲುವಾಗಿ ಇಸ್ಲಾಮಾಬಾದ್ ಗೆ ಬೇಕಿರುವ ಎಲ್ಲ ಸಹಕಾರವನ್ನು ಭಾರತ ನೀಡಲಿದೆ ಎಂದರು. ಪಾಕಿಸ್ತಾನದ ಸರಕಾರ ಉಗ್ರರ ಧಮನಕ್ಕೆ ಮುಂದಾಗಬೇಕು. ಈ ಹಿಂದೆ ಭಾರತದಲ್ಲಿ ಭಯೋತ್ಪಾದನೆ ನಡೆಸಿ ಪಾಕ್ ನಲ್ಲಿ ನೆಲೆಸಿರುವ ಹಾಗೂ ಪೊಲೀಸ್ ವಶದಲ್ಲಿರುವ ಉಗ್ರರಿಗೆ ಮೊದಲು ಶಿಕ್ಷೆ ನೀಡಿ. ಉಗ್ರರಿಗೆ ಶಿಕ್ಷೆ ನೀಡಬೇಕೆನ್ನುವುದು ಭಾರತ ಮತ್ತು ಪಾಕಿಸ್ತಾನ ಪ್ರಜೆಗಳ ಒತ್ತಾಯವಾಗಿದೆ ಎಂದು ಸಿಂಗ್ ಹೇಳಿದರು.

15 ನೇ ಲೋಕಸಭೆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಆಶೀರ್ವಾದ ನೀಡಿದೆ. ಇದರಿಂದ ನಮ್ಮ ಮೇಲೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ದೇಶದ ಆರ್ಥಿಕತೆ, ಸುಭದ್ರತೆ ಕಾಪಾಡುವುದು ಪ್ರಥಮ ಅಧ್ಯತೆಯಾಗಿದೆ. ಕಳೆದ ಸರಕಾರ ಮುಖ್ಯ ಯೋಜನೆಗಳಾದ ಉದ್ಯೋಗ ಖಾತ್ರಿ ಯೋಜನೆ, ಆರೋಗ್ಯ, ಕೆಳವರ್ಗಗಳ ವಿಶೇಷ ಯೋಜನೆಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿವೆ ಎಂದು ಸಿಂಗ್ ವಿವರಿಸಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+