ಬೀದಿಯಲ್ಲಿ ಸಿಕ್ಕ ಅನಾಥ ಪೊಲೀಸ್ ಕ್ಯಾಪ್ ಕಥೆ!

ನಗರದ ಬಿ.ಹೆಚ್.ರಸ್ತೆಯಲ್ಲಿರುವ ಡಿ.ಎಚ್.ಓ. ಕಚೇರಿ ಬಳಿಯಲ್ಲಿ ರಕ್ಷಣೆಯಿಲ್ಲದೆ ಜನರ ಅಲಕ್ಷ್ಯಕ್ಕೆ ಗುರಿಯಾದ ಆರಕ್ಷಕನ ಟೋಪಿ ಆ ಪೇದೆಯ ನಿರ್ಲಕ್ಷತನಕ್ಕೆ ದ್ಯೋತಕವೆ? ಆಟೋ ಚಾಲಕನಿಂದ ಹಿಡಿದು ಬಸ್ಸಿನ ನಿರ್ವಾಹಕನವರೆಗೂ ಖಾಕಿ ಎಂದರೆ ಅದರ ಗೌರವವೇ ಬೇರೆ. ಆದರೆ, ಪೊಲೀಸ್ ಖಾಕಿಗೆ ಎಲ್ಲಿಲ್ಲದ ವಿಶೇಷವಾದ ಸ್ಥಾನಮಾನವಿದೆ. ಪೊಲೀಸ್ ಖಾಕಿಯನ್ನು ಸಮಾಜವನ್ನು ರಕ್ಷಿಸುವ ಸರ್ವಶ್ರೇಷ್ಠ ದಿರಿಸು ಎಂದು ಹೇಳಲಾಗುತ್ತದೆ.
ಪೊಲೀಸ್ ಕ್ಯಾಪ್ ಎಂಬ ಕಾರಣಕ್ಕಾಗಿ ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದರೂ ಅದನ್ನು ನೋಡಿಕೊಂಡೇ ಓಡಾಡುತ್ತಿದ್ದ ನೂರಾರು ಜನ ಸಾರ್ವಜನಿಕರು ಅದರ ಸಹವಾಸಕ್ಕೆ ಹೋಗಲಿಲ್ಲ. ಪೊಲೀಸರಿಂದ ದೂರವಾಗಿಯೇ ಇರಬಯಸುವ ಸಾರ್ವಜನಿಕರು ಬೀದಿಯಲ್ಲಿ ಬಿದ್ದಿದ್ದ ಪೊಲೀಸ್ ಕ್ಯಾಪ್ ಕಂಡಾಗಲೂ ಅದರ ಹತ್ತಿರ ಕೂಡ ಸುಳಿಯಲು ಹೋಗಿಲ್ಲ. ಹಾಗಾಗಿ ಪೊಲೀಸ್ ಕ್ಯಾಪ್ ಅನಾಥವಾಗಿ ಅದೆಷ್ಟೋ ಹೊತ್ತಿನಿಂದ ಬಿದ್ದ ಸ್ಥಳದಲ್ಲಿಯೇ ಇತ್ತು.
ಶಿಕ್ಷಾರ್ಹ ಅಪರಾಧ : ಪೊಲೀಸ್ ಕ್ಯಾಪ್ ಕುರಿತು ಪೊಲೀಸ್ ಇಲಾಖೆಗೆ ವಿಷಯ ತಿಳಿಸಿ ಈ ಬಗ್ಗೆ ಒಳಗಿನ ಮರ್ಮ ಕೇಳಿದಾಗ, ಹೀಗೆ ಪೊಲೀಸ್ ಕ್ಯಾಪ್ ಕಳೆದುಕೊಳ್ಳುವುದಾಗಲಿ ಅಥವಾ ಎಲ್ಲೆಂದರಲ್ಲಿ ಎಸೆಯುವುದಾಗಲಿ ಅದೊಂದು ಅಪರಾಧವೇ. ಒಂದು ಪಕ್ಷ ಸಮವಸ್ತ್ರ ಹಾಳಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಅದಕ್ಕಾಗಿಯೇ ಇರುವ ವಿಭಾಗಕ್ಕೆ ಅದನ್ನು ಒಪ್ಪಿಸಬೇಕು. ಆನಂತರದಲ್ಲಿ ಹೊಸದೊಂದು ಸಮವಸ್ತ್ರವನ್ನು ಪಡೆಯಬೇಕು. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾರೇ ಆಗಲಿ ಸಮವಸ್ತ್ರದ ಬಗ್ಗೆ ನಿರ್ಲಕ್ಷ್ಯವಹಿಸಿದ್ದೇ ಆದಲ್ಲಿ ಅವರಿಗೆ ಇಲಾಖೆ ತಕ್ಕ ದಂಡ ವಿಧಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳುತ್ತಾರೆ.
ಹೀಗೆ ರಸ್ತೆಯಲ್ಲಿ ಪೊಲೀಸ್ ಕ್ಯಾಪನ್ನು ಬಿಸಾಡಿದಂತಹ ಪೊಲೀಸ್ ಪೇದೆ ವಿರುದ್ಧ ಕಾನೂನು ಪ್ರಕಾರ ಶಿಸ್ತಿನ ಕ್ರಮ ಜರುಗಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಹೆಗಲ ಮೇಲಿದೆ. ಹೊರಗಿನ ಅಪರಾಧಿಗಳನ್ನು ಹುಡುಕುವ ಪೊಲೀಸ್ ಇಲಾಖೆಗೆ ಈಗ ಒಳಗಿನ ಆರೋಪಿಯನ್ನು ಹುಡುಕಿ ಕಾನೂನು ಕ್ರಮ ಜರುಗಿಸುವ ಅವಶ್ಯಕತೆ ಇದೆ. ಜಿಲ್ಲಾ ರಕ್ಷಣಾಧಿಕಾರಿ ಮುರುಗನ್ರವರು ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮಾಡಬೇಕಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications