ಜುಲೈ 8ಕ್ಕೆ ಮಮತಾ ಬ್ಯಾನರ್ಜಿ ರೈಲ್ವೆ ಬಜೆಟ್

ಪ್ರಸಕ್ತ ಆರ್ಥಿಕ ವರ್ಷದಿಂದ ಆರನೇ ವೇತನ ಆಯೋಗ ಜಾರಿಯಾಗಿದ್ದು ಸಿಬ್ಬಂದಿಗೆ ರು.14,000 ಕೋಟಿಯನ್ನು ಬಟವಾಡೆ ಮಾಡಬೇಕಾಗಿದೆ. ಈ ಬಾರಿಯ ಬಜೆಟ್ ಮೇಲೆ ಹೊಸ ವೇತನ ಆಯೋಗದ ಪ್ರಭಾವ ಬೀರಬಹುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಶುಚಿತ್ವದ ಬಗ್ಗೆ ಪ್ರಯಾಣಿಕರು ಚಕಾರ ಎತ್ತುತ್ತಿದ್ದಾರೆ. ಈ ಸಂಬಂಧ ಹೊಸ ಯೋಜನೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಗೇಜ್ ಪರಿವರ್ತನೆ, ಹೊಸ ರೈಲ್ವೆ ಮಾರ್ಗಗಳ ರಚನೆ ಹಾಗೂ ಹೊಸ ಕೋಚ್ ಗಳನ್ನ್ನು ಸೇರಿಸುವುದು ಈ ಬಾರಿಯ ಬಜೆಟ್ ನ ಪ್ರಮುಖ ಉದ್ದೇಶಗಳು. ಮೆಟ್ರೊ ನಗರಗಳಲ್ಲಿ ಭದ್ರತಾ ಠಾಣೆಗಳನ್ನು ಸ್ಥಾಪಿಸುವ ಬಗ್ಗೆಯೂ ಚಿಂತಿಸಲಾಗಿದೆ.
(ಏಜೆನ್ಸೀಸ್)












Click it and Unblock the Notifications