ಆರ್ಥಿಕ ಸಂಕಷ್ಟ; ಜನರಲ್ ಮೋಟರ್ಸ್ ದಿವಾಳಿ
ನ್ಯೂಯಾರ್ಕ್, ಜೂ.2: ಅಮೆರಿಕಾ ಇತಿಹಾಸದಲ್ಲಿ ನಾಲ್ಕನೇ ಅತಿದೊಡ್ಡ ದಿವಾಳಿ ಪ್ರಕರಣ ವರದಿಯಾಗಿದೆ. ಅಮೆರಿಕಾದ ಶತಮಾನದಷ್ಟು ಹಳೆಯ ಕಾರು ಉತ್ಪಾದನಾ ಸಂಸ್ಥೆ ' ಜನರಲ್ ಮೋಟರ್ಸ್ ' ಜಾಗತಿಕ ಆರ್ಥಿಕ ಹಿನ್ನಡೆ ಹಾಗೂ ಪಾತಾಳಕ್ಕೆ ಕುಸಿದ ಮಾರಾಟದಿಂದ ತೀವ್ರ ನಷ್ಟಕ್ಕೆ ಗುರಿಯಾಗಿ ನಿನ್ನೆ ' ದಿವಾಳಿ ಅರ್ಜಿಯನ್ನು ' ಸಲ್ಲಿಸಿದೆ.
ಭಾರತದಲ್ಲಿನ ಕಂಪೆನಿಯ ಕಾರ್ಯನಿರ್ವಹಣೆ ಮುಂದುವರಿಯಲಿದ್ದು ಈ ವರ್ಷದಲ್ಲಿ ಇನ್ನೂ ಎರಡು ಹೊಸ ಕಾರುಗಳನ್ನು ಹೊರತರುವ ಯೋಜನೆಯನ್ನು ವೇಳಾಪಟ್ಟಿಗೆ ಅನುಗುಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜನರಲ್ ಮೋಟರ್ಸ್ ಹೇಳಿಕೆ ನೀಡಿರುವುದು ಭಾರತದಲ್ಲಿ ಕೆಲಸ ಮಾಡುವ ಸಂಸ್ಥೆಯ ಕಾರ್ಮಿಕರಿಗೆ ನೆಮ್ಮದಿಯ ವಿಷಯ.
ಕಳೆದ ಕೆಲವು ತಿಂಗಳಿಂದ ಅಮೆರಿಕಾದ ತೆರಿಗೆ ಪಾವತಿದಾರರ ಹಣದ ಮೇಲೆ ಜೀವ ಉಳಿಸಿಕೊಂಡಿರುವ ಸಂಸ್ಥೆ ನ್ಯೂಯಾರ್ಕ್ ದಕ್ಷಿಣ ಜಿಲ್ಲೆಯಲ್ಲಿರುವ ನ್ಯಾಯಾಲಯದಲ್ಲಿ ಕಾಯಿದೆಯ 11ನೇ ಅಧ್ಯಾಯದಡಿ ದಿವಾಳಿ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದೆ. ಸಂಸ್ಥೆ ದಿವಾಳಿ ಅರ್ಜಿ ಸಲ್ಲಿಸಿದ ಒಡನೆಯೇ ನ್ಯೂಯಾರ್ಕ್ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಆರಂಭಗೊಂಡ ಅರ್ಧ ತಾಸಿನ ಒಳಗೆ ಸಂಸ್ಥೆಯ ಷೇರು ಮೌಲ್ಯ ಶೇ .32 ರಷ್ಟು ಕುಸಿದಿದೆ.
ಸಂಸ್ಥೆಯ ಈ ಕ್ರಮಕ್ಕೆ ಒಬಾಮ ಆಡಳಿತದ ಬೆಂಬಲವಿದ್ದು ದಿವಾಳಿ ರಕ್ಷಣೆ ಪಡೆದ ಬಳಿಕ ಕಂಪನಿ ಪುನರ್ ರಚನೆಗೊಂಡು ಈ ಸಂಸ್ಥೆಯಲ್ಲಿ ಅಮೆರಿಕಾ ಸರಕಾರವು ಬೃಹತ್ ಪ್ರಮಾಣದ ಪಾಲನ್ನು ಹೊಂದಲಿದೆ. ಸರಕಾರವು ಸಂಸ್ಥೆಯ ಶೇ. 60 ರಷ್ಟು ಪಾಲನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ. 2002 ರಲ್ಲಿ ವರ್ಲ್ಡ್ ಕಾಮ್, 2008 ರಲ್ಲಿ ಲೆಹ್ಮನ್ ಬ್ರದರ್ಸ್ ಮತ್ತು ವಾಷಿಂಗ್ಟನ್ ಮ್ಯೂಚ್ಯುಯಲ್ ನಂತರ ಅಮೆರಿಕಾದ ಅತಿ ದೊಡ್ಡ ದಿವಾಳಿ ಪ್ರಕರಣ ಇದಾಗಿದೆ.
(ಏಜೆನ್ಸೀಸ್)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications