ಇನ್ನೂ ಪತ್ತೆಯಾಗದ ಬಾಲಕ ಅಭಿಷೇಕ್ ಶವ

ಅಭಿಷೇಕ್ ಪೋಷಕರು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದು ಅವರ ನೋವು ಮುಗಿಲು ಮುಟ್ಟಿದೆ. ಬಾಲಕನ ತಂದೆ ಪ್ರಕಾಶ್ ಮತ್ತು ತಾಯಿ ಭಾರತಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಅಗ್ನಿಶಾಮಕ ದಳದ 20 ಮಂದಿ ಸಿಬ್ಬಂದಿ ಹಾಗೂ ಬಿಬಿಎಂಪಿಯ 20 ಮಂದಿ ಶೋಧನಾ ಕಾರ್ಯ ನಡೆಸಿದರು. ಕೆಲವು ಸ್ವಯಂ ಸೇವಾ ಸದಸ್ಯರು ಸಣ್ಣ ಚರಂಡಿಗಳಲ್ಲಿ ಹುಡುಕಾಟ ನಡೆಸಿದರು. ಆದರೂ ಬಾಲಕ ಪತ್ತೆಯಾಗಿಲ್ಲ.
ಮೋರಿಗಳಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕೆಲವೆಡೆ ಕಾಲುವೆಗಳಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದೂ ಶೋಧ ಕಾರ್ಯಕ್ಕ್ಕೆ ಅಡ್ಡಿಯಾಗಿದೆ. ಪತ್ತೆ ಕಾರ್ಯಚರಣೆ ಮುಂದಿವರಿಯುತ್ತಿದೆ. ಶಾಸಕ ಕೆ ಜೆ ಜಾರ್ಜ್ ಹಾಗೂ ಪಾಲಿಕೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications