ಆದಿಚುಂಚನಗಿರಿಶ್ರೀಗಳಿಗೆ ಗೌ. ಡಾಕ್ಟರೇಟ್ ಪ್ರದಾನ
ಬೆಂಗಳೂರು,
ಮೇ.31: ಆದಿ ಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶ ಬಾಲಗಂಗಾಧರನಾಥ ಸ್ವಾಮಿಜಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ನಗರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. id="toptextpromo">ನಂತರ
ಮಾತನಾಡಿದ ಮುಖ್ಯಮಂತ್ರಿಗಳು , ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲು ಉಪಕುಲಪತಿ ಪ್ರಭುದೇವ ಅವರು ಪ್ರಸ್ತಾಪಿಸಿದಾಗ ಬಹಳ ಸಂತೋಷದಿಂದ ಅದಿಚುಂಚನಗಿರಿ ಶ್ರೀಗಳಿಗೆ ನೀಡಲು ನಿರ್ಧರಿಸಲಾಯಿತು. ಸ್ವಾಮೀಜಿಗಳಿಗೆ ಈ ಪದವಿಯಿಂದ ನೀಡಿರುವುದರಿಂದ ವಿವಿ ಗೌರವ ಹೆಚ್ಚಾಗಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಅನ್ನ
,ಅಕ್ಷರ, ಆರೋಗ್ಯ ಸೇವೆ ನೀಡುವ ಮೂಲಕ ಬಾಲಗಂಗಾಧರನಾಥ ಸ್ವಾಮೀಜಿ ಅವರು ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಸಂಸದ ಅನಂತ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು .ಸಚಿವ ಆರ್ ಅಶೋಕ್, ವಿ ಸೋಮಣ್ಣ ಮುಂತಾದ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.(ದಟ್ಸ್ ಕನ್ನಡವಾರ್ತೆ)












Click it and Unblock the Notifications