ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೌಡರ ಕುಟುಂಬವಿರುದ್ಧ ಸ್ಪರ್ಧೆಗೆ ರೆಡಿ; ಚೆನ್ನಿಗಪ್ಪ
ಕಳೆದ ಮರುಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚೆನ್ನಿಗಪ್ಪ, ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಸೋಲನುಭವಿಸಿದ್ದರು. ದೇವೇಗೌಡರ ಕುಟುಂಬದಿಂದ ರಾಮನಗರ ಕ್ಷೇತ್ರದಿಂದ ಅಖಾಡಕ್ಕಿಳಿದರೆ ಅವರ ವಿರುದ್ಧ ಸ್ಪರ್ಧಿಸಲು ನಾನು ರೆಡಿ. ಈ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿ ಬಿಜೆಪಿಯಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸುವೆ ಎಂದರು.
ಮರು ಚುನಾವಣೆಯಲ್ಲಿ ಯಾವುದೇ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ನೀಡಿದರೂ ಸ್ಪರ್ಧಿಸಲು ಸಿದ್ಧ. ಮಧುಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಹಿಂದಿನಿಂದಲೂ ವೋಟ್ ಬ್ಯಾಂಕ್ ಇರಲಿಲ್ಲ. ಇದರಿಂದ ಸೋಲಬೇಕಾಯಿತು ಎಂದು ಚೆನ್ನಿಗಪ್ಪ ಸಮಜಾಯಿಷಿ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ದೇವೇಗೌಡ ಬಿಜೆಪಿ ಜೆಡಿಎಸ್ ಎಚ್ ಡಿ ಕುಮಾರಸ್ವಾಮಿ ಅನಿತಾ ಕುಮಾರಸ್ವಾಮಿ hd kumaraswamy ರಾಮನಗರ ramanagara bhavani revanna ಭವಾನಿ ರೇವಣ್ಣ
Story first published: Saturday, May 30, 2009, 11:55 [IST]