ಗುರುವಾರ ಅರ್ಧಶತಕ ಮಂತ್ರಿಗಳ ಪ್ರಮಾಣ ವಚನ
ನವದೆಹಲಿ, ಮೇ. 27 : ಕಳೆದೆರಡು ದಿನಗಳಿಂದ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಖಾತೆ ಹಂಚಿಕೆಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಅಂತ್ಯ ಹಾಡಿದೆ. ಗುರುವಾರ ಬೆಳಗ್ಗೆ 11.30ಕ್ಕೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ಜರುಗಲಿದ್ದು, ನಾಳೆ ಪ್ರಮಾಣ ವಚನ ಸ್ವೀಕರಿಸಲಿರುವ ಸಂಸದರಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ದೂರವಾಣಿ ಮೂಲಕ ಸಂಪರ್ಕಿಸಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ ಪ್ರಧಾನಮಂತ್ರಿ ಸೇರಿ ಒಟ್ಟು 34 ಕ್ಯಾಬಿನೆಟ್ ದರ್ಜೆ ಸಚಿವರು, 7 ಮಂದಿ ಸ್ವಾತಂತ್ರ ಸಚಿವರು ಹಾಗೂ 36 ರಾಜ್ಯ ಖಾತೆ ಸೇರಿ ಒಟ್ಟು 79 ಮಂದಿಯನ್ನು ನೂತನ ಸರಕಾರ ಒಳಗೊಂಡಿರುತ್ತದೆ.
ಕೇಂದ್ರದ ಮಂತ್ರಿಗಳಾಗುವ ಸಂಸದರ ಪಟ್ಟಿ ಇಂತಿದೆ.
ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ, ಆಸ್ಕರ್ ಫರ್ನಾಂಡೀಸ್, ದಯಾನಿಧಿ ಮಾರನ್, ಸಲ್ಮಾನ್ ಖುರ್ಷಿದ್, ಎ ರಾಜಾ, ಎಂ ಕೆ ಅಳಗಿರಿ, ಡಿ ಪುರಂದರೇಶ್ವರಿ, ಅಜಯ್ ಮಾಕನ್, ಡಿ ಕೆ ವಾಸನ್, ಮುಕುಲ್ ವಾಸ್ನಿಕ್, ಪ್ರಫುಲ್ ಪಟೇಲ್, ಶ್ರೀಪ್ರಕಾಶ್ ಜೈಶ್ವಾಲ್, ಜೈರಾಮ್ ರಮೇಶ್, ಎ ಸಾಯಿ ಪ್ರತಾಪ್, ಗುರುದಾಸ್ ಕಾಮತ್, ಎಂ ಎಂ ಪುಲಂ ರಾಜ್, ತುಷಾರ್ ಬಾಯಿ ಚೌಧರಿ, ಇ ಅಹ್ಮದ್, ಫಾರೂಕ್ ಅಬ್ದುಲ್ಲಾ, ವಿಲಾಸ್ ರಾವ್ ದೇಶಮುಖ್, ವೀರಭದ್ರ ಸಿಂಗ್, ಕುಮಾರಿ ಸಿಲ್ಜಾ, ಜ್ಯೋತಿರಾಧಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಆರ್ ಆರ್ ಪಾಟೀಲ್, ಆರ್ ಪಿ ಎನ್ ಸಿಂಗ್, ವಿನ್ಸೆಂಟ್ ಪಾಲ್, ವಿ ನಾರಾಯಣ ಸಮಿ, ಎಂ ರಾಮಚಂದ್ರನ್, ಪನಬಕ್ ಲಕ್ಷ್ಮಿ, ಅಗಾತಾ ಸಂಗ್ಮಾ, ಕಾಂತಿಲಾಲ್ ಬುರಿಯಾ, ಮುಕುಲ್ ರಾಯ್, ಪಿಪಿ ಪಳನಿಮನಿಯಕ್ಕಮ್, ಎಸ್ ಗಂಧೀಸೆಲ್ವಮ್, ಪ್ರಣೀತ್ ಕೌರ್, ಸಚಿನ್ ಪೈಲೆಟ್, ಶಶಿ ತರೂರ್, ಮಾಧವ್ ಖಂಡೇಲಾ, ಕೆ ವಿ ಧಾಮಸ್, ಸುಗತ್ ರಾಯ್. ದಿನೇಶ್ ತ್ರಿವೇದಿ, ಸುಲ್ತಾನ್ ಅಹ್ಮದ್, ಮೋಹನ್ ಜಾಟುವಾ, ಡಿ ನೆಪೋಲಿಯನ್, ಎಂ ಎಸ್ ಗಿಲ್, ಪ್ರಥ್ವಿರಾಜ್ ಚೌಹಾಣ್, ದಿನ್ಸಾ ಪಟೇಲ್, ಕೃಷ್ಣ ತಿರಥ್. ಭರತ್ ಸಿನ್ಹಾ ಸೋಲಂಕಿ, ಪ್ರದೀಪ್ ಜೈನ್, ಹರೀಷ್ ರಾವತ್, ಶಿಶಿರ್ ಅಧಿಕಾರಿ, ಸುಭೋದಕಾಂತ್ ಸಾಯಿ.
(ಏಜನ್ಸೀಸ್)