ಕಳ್ಳಿ ಇಂಜಿನಿಯರ್ ಪೊಲೀಸ್ ಬಲೆಗೆ
ಬೆಂಗಳೂರು, ಮೇ. 19 : ಪೇಯಿಂಗ್ ಗೆಸ್ಟ್ ನೆಪದಲ್ಲಿ ಕಳವು ಮಾಡುತ್ತಿದ್ದ ಬಿಇ ಪದವೀಧರೆಯನ್ನು ಹಳೆವಿಮಾನ ನಿಲ್ದಾಣದ ಪೊಲೀಸರು ಬಂಧಿಸಿ 9 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಉಡಮಲ್ ಪೇಟೆಯ ಪೆರಿಯವಾಲ ನಿವಾಸಿ ದೇವಿ ಮಾಹಾಲಕ್ಷ್ಮಿ (26) ಬಂಧಿತ ಆರೋಪಿ. ಪೇಯಿಂಗ್ ಗಸ್ಟ್ ನೆಪದಲ್ಲಿ ನಗರದ ವಿವಿಧೆಡೆ ಮನೆಗಳಲ್ಲಿ ಉಳಿದುಕೊಂಡು ಕೊಠಡಿಯಲ್ಲಿ ಸಹವರ್ತಿ ಇಲ್ಲದಿದ್ದಾಗ ಅವರಿಗೆ ಸೇರಿದ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪೇಯಿಂಗ್ ಗೆಸ್ಟ್ ಮನೆಯಲ್ಲಿ ಸಹವರ್ತಿಗಳ ಕ್ರೆಡಿಟ್ ಕಾರ್ಡ್ ಗಳನ್ನು ಕಳವು ಮಾಡಿ ಮನೆ ಬಳಿಕೆ ವಸ್ತುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಳು.
ವಿಮಾನ ನಿಲ್ದಾಣ, ಎಚ್ ಎಎಲ್, ಕೆ ಆರ್ ಪುರ, ಬೈಯಪ್ಪನಹಳ್ಳಿ, ಜೀವನಭೀಮಾನಗರ, ಇಂದಿರಾನಗರ, ಕೋರಮಂಗಲ, ಹಲಸೂರು, ಮಡಿವಾಳ, ಮೈಕೋಲೇಔಟ್, ತಿಲಕನಗರ, ಜಯನಗರ, ಜೆಪಿ ನಗರ, ರಾಮಮೂರ್ತಿನಗರ, ಹುಳಿಮಾವು ಹಾಗೂ ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ 28 ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ, ನಿರುದ್ಯೋಗಿಯಾಗಿದ್ದ ಮಹಾದೇವಿ ವಿದ್ಯಾಭ್ಯಾಸಕ್ಕೆ ಪಡೆದಿದ್ದ ಸಾಲ ತೀರಿಸಲು ಕಳವು ಮಾಡುತ್ತಿದ್ದಳು ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications