ಪಿಎಂ ಸ್ಥಾನಕ್ಕೆ ಮನಮೋಹನ್ ರಾಜೀನಾಮೆ
ನವದೆಹಲಿ, ಮೇ. 18 : ಸಚಿವ ಸಂಪುಟದ ನಂತರ ರಾಷ್ಟ್ರಪತಿ ಭವನಕ್ಕೆ ತೆರಳಿದ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಹಾಗೂ ಸಚಿವ ಸಂಪುಟದ ಎಲ್ಲ ಸಚಿವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸಲ್ಲಿಸಿದರು. ಇದರಿಂದ 14ನೇ ಲೋಕಸಭೆಯನ್ನು ವಜಾಗೊಳಿಸಲು ಪ್ರತಿಭಾ ಪಾಟೀಲ್ ಸಮ್ಮತಿಸಿದರು. ಈ ತಿಂಗಳು ಕೊನೆಯ ವಾರ ಕೇಂದ್ರದಲ್ಲಿ ನೂತನ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ನಿರೀಕ್ಷೆಯಂತೆ ಕಾನೂನು ಪ್ರಕಾರ ಅತಿಹೆಚ್ಚು ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಪಕ್ಷಕ್ಕೆ ಸರಕಾರ ರಚಿಸಲು ರಾಷ್ಟ್ರಪತಿ ಆಹ್ವಾನ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್ ನೇತೃತ್ವದ ಯುಪಿಎ 261 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರಕಾರ ರಚಿಸಲು ಬೇಕಿರುವ 11 ಸ್ಥಾನಗಳಿಗೆ ಕಾಂಗ್ರೆಸ್, ಹುಟುಕಾಟ ಆರಂಭಿಸಿದೆ. ಕಡಿಮೆ ತೊಂದರೆ ಪ್ರಾದೇಶಿಕ ಪಕ್ಷದ ಕಡೆಗೆ ಮುಖಮಾಡಿದ್ದು, ಜೆಡಿಎಸ್ ಪಕ್ಷ ಈಗಾಗಲೇ ಕೇಂದ್ರ ಸರಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ. ಆರ್ ಎಲ್ ಡಿ ಸೇರಿ ಪಕ್ಷೇತರರು ಸರಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ.
(ಏಜನ್ಸೀಸ್)