ಲಾಟೀನು ಕೈಬಿಟ್ಟ ಕಾಂಗ್ರೆಸ್, ಸಚಿವ ಸ್ಥಾನವಿಲ್ಲ

ಸಿಎನ್ಎನ್-ಐಬಿಎನ್ ವಾರ್ತಾ ವಾಹಿನಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾವುದೇ ಪಕ್ಷವಿರಲಿ. ನಾಯಕರಿರಲಿ, ಏಕತೆಯಿಂದ ರಚಿಸಿರುವ ಒಕ್ಕೂಟದ ತತ್ವ, ಸಿದ್ದಾಂತಕ್ಕೆ ತಲೆಬಾಗಬೇಕು. ಪಕ್ಷಕ್ಕಿಂತ ಯಾವ ವ್ಯಕ್ತಿಯೂ ದೊಡ್ಡರಲ್ಲ. ಆದರೆ, ಸರಕಾರದಲ್ಲಿರುವ ಲಾಲು ಚುನಾವಣೆ ವೇಳೆಯಲ್ಲಿ ಮನಬಂದಂತೆ ಟೀಕಿಸುವುದಲ್ಲದೆ, ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಶಿಸ್ತಿನ ಪಕ್ಷ. ಇಂತಹ ವ್ಯಕ್ತಿಗಳಿಗೆ ಸರಕಾರದಲ್ಲಿ ಸ್ಥಾನವಿಲ್ಲ. ಲಾಲು ಪ್ರಸಾದ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಸಚಿವರಾಗಲು ಸಾಧ್ಯವಿಲ್ಲ ಎಂದು ಪ್ರಣಬ್ ಸ್ಪಷ್ಟಪಡಿಸಿದರು.
ನೂತನ ಯುಪಿಎ ಸರಕಾರದಲ್ಲಿ ಯುವಸಂಸದರಿಗೆ ಅವಕಾಶ ನೀಡಬೇಕು ಎಂದು ನಿರ್ಧರಿಸಲಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಈಗಾಗಲೇ ರಾಹುಲ್ ಗಾಂಧಿ ಅವರನ್ನು ಸಚಿವರಾಗಲು ಆಹ್ವಾನಿಸಿದ್ದಾರೆ. ಇವರೊಂದಿಗೆ ಅನೇಕ ಯುವ ಮುಖಗಳನ್ನು ನೂತನ ಸರಕಾರದಲ್ಲಿ ಕಾಣಬಹುದು ಎಂದು ಮುಖರ್ಜಿ ಹೇಳಿದರು.
ಕಾಂಗ್ರೆಸ್ ಪಕ್ಷದೊಂದಿಗೆ ಮಮತಾ ಬ್ಯಾನರ್ಜಿ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ, ಅವರಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ. ಆದರೆ ಇಂತಹ ಖಾತೆಯನ್ನು ನೀಡಬೇಕು ಎಂದು ತೀರ್ಮಾನಿಸಿಲ್ಲ. ಅವರು ಕೂಡಾ ಇಂತಹ ಖಾತೆಯೆಬೇಕು ಎಂದು ಪಟ್ಟು ಹಿಡಿದಿಲ್ಲ. ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಮುಖರ್ಜಿ ಹೇಳಿದರು.
(ಏಜನ್ಸೀಸ್)
ಕೇಂದ್ರದ ಕೊನೆಯ ಸಂಪುಟ ಸಭೆ ಆರಂಭ












Click it and Unblock the Notifications