ದೇವೇಗೌಡ, ಕುಮಾರಸ್ವಾಮಿ ಗೆಲುವು ?
ಬೆಂಗಳೂರು, ಮೇ. 16 : ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಟೆಕ್ಕಿ ಜನಾರ್ದನಸ್ವಾಮಿ ಗೆಲುವು ಬಹುತೇಕ ಖಚಿತವಾಗಿದೆ. 60 ಸಾವಿರ ಮತಗಳ ಅಂತರದಿಂದ ಮುನ್ನಡೆ ಹೊಂದಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು 50 ಸಾವಿರಗಳ ಭಾರಿ ಅಂತರ ಮುನ್ನಡೆಯಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿ 55 ಸಾವಿರ ಮುನ್ನಡೆ ಪಡೆದು ಗೆಲುವಿನ ನಾಗಾಲೋಟದಲ್ಲಿ ಸಾಗಿದ್ದಾರೆ. ಅಚ್ಚರಿ ಬೆಳವಣಿಗೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಬಿಜೆಪಿಯ ಶಿವಕುಮಾರ್ ಉದಾಸಿ 36 ಸಾವಿರ ಮತಗಳ, ಶಿವಮೂಗ್ಗದಲ್ಲಿ ಬಿಜೆಪಿಯ ಬಿ ವೈ ರಾಘವೇಂದ್ರ 22 ಸಾವಿರ ಮುನ್ನಡೆ ಹೊಂದಿದ್ದಾರೆ.
ತುಮಕೂರಿನಲ್ಲಿ ಬಿಜಾಪುರದಲ್ಲಿ ಬಿಜೆಪಿಯ ರಮೇಶ್ ಜಿಗಜಿಣಿಗಿ, ಮಂಡ್ಯದಲ್ಲಿ ಜೆಡಿಎಸ್ ಚೆಲುವರಾಯಸ್ವಾಮಿ 18 ಸಾವಿರ, ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷದ ಕೃಷ್ಣ ಭೈರೇಗೌಡ 4 ಸಾವಿರ ಮತಗಳ ಅಂತರ ಮುನ್ನಡೆ ಸಾಧಿಸಿದ್ದಾರೆ. ಚಿಕ್ಕೋಡಿಯಲ್ಲಿ ಬಿಜೆಪಿಯ ರಮೇಶ್ ಕತ್ತಿ, ಮಂಗಳೂರಿನಲ್ಲಿ ಬಿಜೆಪಿಯ ನಲೀನ ಕುಮರ್ ಕಟೀಲ್ 10 ಸಾವಿರ, ಬೆಳಗಾವಿಯಲ್ಲಿ ಬಿಜೆಪಿ ಸುರೇಶ ಅಂಗಡಿ 43 ಸಾವಿರ ಮತಗಳ ಮುನ್ನಡೆ. ರಾಯಚೂರಿನಲ್ಲಿ ಬಿಜೆಪಿ ಮುನ್ನಡೆ,
(ದಟ್ಟ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications