ತಿರುಪತಿಯಲ್ಲಿ ಚಿರಂಜೀವಿ ಜಯಭೇರಿ
ತಿರುಪತಿ, ಮೇ.16: ತಮ್ಮ ಮೊದಲ ಚುನಾವಣೆಯಲ್ಲಿ ತಿರುಪತಿ ವಿಧಾನಸಭೆ ಕ್ಷೇತ್ರದಿಂದ ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಚಿರಂಜೀವಿ ಗೆಲುವು ಸಾಧಿಸಿದ್ದಾರೆ. ಚಿರಂಜೀವಿ ತಮ್ಮ ಸಮೀಪದ ಸ್ಪರ್ಧಿ ಮತ್ತು ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಬಿ ಕರುಣಾಕರ ರೆಡ್ಡಿ ಅವರನ್ನು 10,500 ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ.
ಚಿರಂಜೀವಿ ಸ್ಪರ್ದಿಸಿರುವ ಮತ್ತೊಂದು ವಿಧಾನಸಭೆ ಕ್ಷೇತ್ರ ಪಾಲಕೊಲ್ಲುನಲ್ಲಿ ಹಿನ್ನೆಡೆ ಸಾಧಿಸಿದ್ದಾರೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮತದಾರರು ಚಿರಂಜೀವಿಯನ್ನು ಯಾಕೋ ಏನೋ ತಿರಸ್ಕರಿಸಿದ್ದಾರೆ.
(ಏಜೆನ್ಸೀಸ್)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications