ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಹುದ್ದೆಗೆ ಪವಾರ್ ಸೂಕ್ತ: ಜಯಲಲಿತಾ

By Staff
|
Google Oneindia Kannada News

Jayalalitha
ನವದೆಹಲಿ, ಮೇ. 15 : ಎನ್ ಸಿಪಿ ನಾಯಕ ಶರದ್ ಪವಾರ್ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸುದ್ದಿ ಕಿವಿಗೆ ಬಡಿಯುತ್ತಿದ್ದಂತೆಯೇ ಐಎಸಿಸಿ ಸೋನಿಯಾ ಗಾಂಧಿ ಅವರು ಪವಾರ್ ಅವರನ್ನು ಕರೆಸಿ ಯಪಿಎಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ತೃತೀಯ ರಂಗದಲ್ಲಿ ಗುರುತಿಸಿಕೊಂಡಿರುವ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ಪ್ರಧಾನಮಂತ್ರಿ ಹುದ್ದೆಗೆ ಶರದ್ ಪವಾರ್ ಸಮರ್ಥ ವ್ಯಕ್ತಿ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ.

ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ತೃತೀಯ ರಂಗ ಹಾಗೂ ಚತುರ್ಥ ರಂಗ ಬೆಂಬಲ ಪಡೆದು ತಮ್ಮ ರಾಜಕೀಯ ಜೀವನ ಉನ್ನತ ಆಸೆಯನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿದ್ದಾರೆ ಎಂದು ಗುರುವಾರವೇ ಸುದ್ದಿಯೊಂದು ದಟ್ಟವಾಗಿತ್ತು. ಜಯಲಲಿತಾ ಅವರ ಹೇಳಿಕೆ ಪವಾರ್ ಅವರ ಕನಸಿಗೆ ನೀರೆರೆದಿದ್ದಾರೆ.

ಯುಪಿಎಗೆ ಸರಕಾರ ರಚಿಸಲು ಅಗತ್ಯ ಸಂಖ್ಯಾಬಲ ಕೊರತೆ ಬಿದ್ದಲ್ಲಿ ಶರದ್ ಪವಾರ್ ಅವರು ಯುಪಿಎಯಿಂದ ಹೊರಬಂದು ತೃತೀಯ ರಂಗ ಮತ್ತು ಚತುರ್ಥ ರಂಗದ ಬೆಂಬಲ ಪಡೆದುಕೊಂಡು ಪ್ರಧಾನಿ ಆಗಬೇಕು. ಇದಕ್ಕೆ ತೃತೀಯ ರಂಗದ ಬಹುತೇಕ ನಾಯಕರ ಸಹಮತವಿದೆ. ಅಗತ್ಯ ಸಂಖ್ಯಾಬಲ ಕಡಿಮೆಯಾದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲ ಕೇಳುವ ಸಾಧ್ಯತೆಗಳೂ ಇದೆ ಎನ್ನಲಾಗಿದೆ.

ಶರದ್ ಪವಾರ್ ಪ್ರಧಾನಮಂತ್ರಿಯಾಗುವ ಅವಕಾಶ ಒದಗಿ ಬಂದರೆ ಎನ್ ಡಿಎದಲ್ಲಿರುವ ಶಿವಸೇನೆ ಕೂಡಾ ತೃತೀಯ ರಂಗಕ್ಕೆ ಬೆಂಬಲ ನೀಡುವುದನ್ನು ತಳ್ಳಹಾಕುವಂತಿಲ್ಲ. ಚುನಾವಣೋತ್ತರ ಫಲಿತಾಂಶದಲ್ಲಿ ಎಡಪಕ್ಷಗಳು, ಎಐಎಡಿಎಂಕೆ, ತೆಲುಗು ದೇಶಂ ಹಾಗೂ ಜೆಡಿಎಸ್ ಸೇರಿ 100 ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿವೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ತೃತೀಯ ರಂಗದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಪಿಎಂ ಹುದ್ದೆ ಮೇಲೆ ಶರದ್ ಪವಾರ್ ಕಣ್ಣು
ಬಿಜೆಪಿಗೆ ಕೈಕೊಡಲು ನಿತೀಶ್ ಕುಮಾರ್ ತಯಾರಿ
ಅಡ್ವಾಣಿಯೇ ಪ್ರಧಾನಿ : ಶಿವಲಿಂಗ ಸ್ವಾಮೀಜಿ ಭವಿಷ್ಯ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X