ಮಂಗಳೂರು : ಕುಖ್ಯಾತ ರೌಡಿ ಪಾಂಡು ಪೈ ಹತ್ಯೆ
ಮಂಗಳೂರು, ಮೇ. 12 : ಕುಖ್ಯಾತ ರೌಡಿಯನ್ನು ಮಂಗಳೂರು ಕಂಕನಾಡಿ ರೈಲು ನಿಲ್ದಾಣದ ಸಮೀಪ ಇರಿದು ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಕೊಲೆಯಾಗಿರುವ ರೌಡಿ ಪಾಂಡು ಪೈ ಎಂದು ಗುರುತಿಸಲಾಗಿದೆ.
ಈತ ಮಂಗಳೂರಿನವನಾಗಿದ್ದು, ಮುಂಬೈ, ಗುಜರಾತ್, ಸೂರತ್ನಲ್ಲೂ ಈತನ ವಿರುದ್ದ ಕೊಲೆ ಕೇಸುಗಳಿವೆ ಎನ್ನಲಾಗಿದೆ. ಹತ್ತು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ದೇಜು ಶೆಟ್ಟಿ ಕೊಲೆ ಸಹಿತ ಐದಕ್ಕೂ ಹೆಚ್ಚು ಕೊಲೆ ಕೇಸುಗಳಿದ್ದವು. ಫಣಿಯೂರು ಸಾಧು ಶೆಟ್ಟಿ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಈತ ಸಾಧು ಶೆಟ್ಟಿ ಹತ್ಯೆ ನಂತರ ತಲೆಮರೆಸಿಕೊಂಡಿದ್ದ. ಈತನನ್ನು ಯಾರು ಕೊಲೆ ಮಾಡಿದ್ದಾರೆ ಎನ್ನುವುದು ನಿಗೂಢವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಎಂ.ಆರ್ ಶೆಟ್ಟಿ ಮನೆಯಲ್ಲಿ ಭಾರಿ ಕಳ್ಳತನ
ಮಂಗಳೂರು ಹೃದಯಭಾಗದ ಮನೆಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 1.5 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ದೋಚಿದ್ದಾರೆ. ಸೋಮವಾರ ತಡರಾತ್ರಿ ಅಥವಾ ಮಂಗಳವಾರ ಬೆಳಗಿನಜಾವ ಈ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ.
ಪಾಂಡೇಶ್ವರದಲ್ಲಿ ಡಾ.ಎಂ.ಆರ್.ಶೆಟ್ಟಿ ಎಂಬವರಿಗೆ ಸೇರಿದ ಮನೆಯಲ್ಲಿ ಈ ಕಳವು ನಡೆದಿದೆ. ಮನೆಯವರೆಲ್ಲರೂ ಬೆಂಗಳೂರಿಗೆ ಹೋಗಿದ್ದರು. ಇಂದು ಬೆಳಿಗ್ಗೆಯಷ್ಟೇ ಅವರು ವಾಪಸಾದಾಗ ಕಳವು ಘಟನೆ ಅರಿವಿಗೆ ಬಂತು. ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ಸುದ್ದಿ ತಿಳಿಯುತ್ತಲೇ ಮನೆಗೆ ಭೇಟಿ ನೀಡಿ ತನಿಖೆಗ ಮಾರ್ಗದರ್ಶನ ನೀಡಿದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications