ಜಯಪ್ರದಾ ಆತ್ಮಹತ್ಯೆ : ಅಮರ್ ಅಸಂಬದ್ಧ ಹೇಳಿಕೆ

ಇಂಥ ಹೇಳಿಕೆ ರಾಜಕೀಯದಲ್ಲಿ ಅಪರೂಪವೇ ಆದರೂ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರೂ ಆಡುವ ರಾಜಕೀಯ ಚೆದುರಂಗದಾಟ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ವೈರಿಗಳನ್ನು ಹಣಿಯಲು ಈ ಮುಖಂಡರು ಯಾವ ಮಟ್ಟಕ್ಕೆ ಇಳಿಯಬಲ್ಲರು ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನಬೇಕಿಲ್ಲ. ಬಿಎಸ್ಪಿ ಸರಕಾರವನ್ನು ಪತನಗೊಳಿಸಲು ಯಾವ ಸಹಕಾರ ನೀಡಿತ್ತಾರೋ ಅವವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿಕೆ ನೀಡಿದ್ದರು.
ಮಾತು ಮುಂದುರೆಸಿದ ಅಮರ್ ಸಿಂಗ್, ನಮ್ಮ ಸೈಕಲ್ ದಿಲ್ಲಿಗೆ ಹೋಗಬೇಕೆಂದರೆ ನಿಮ್ಮ ಮತ ಅಗತ್ಯ. ರಾಮಪುರ್ ಕ್ಷೇತ್ರದಲ್ಲಿ ಈ ಸಾರಿ ಜಯಪ್ರದಾ ಅವರನ್ನು ಆರಿಸಿದಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಹುದು. ಆದ್ದರಿಂದ ಈ ಚುನಾವಣೆಯಲ್ಲಿ ಜಯಪ್ರದಾ ಅವರ ಕೈಹಿಡಿದು, ಸೈಕಲ್ ನ್ನು ದಿಲ್ಲಿಗೆ ಕಳುಹಿಸಿಕೊಂಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
2004 ರ ಲೋಕಸಭೆ ಚುನಾವಣೆಯಲ್ಲಿ ರಾಮಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಪ್ರದಾ ಕಾಂಗ್ರೆಸ್ ಪಕ್ಷದ ಬೇಗಂ ನೂರ್ ಬಾನು ಎಂಬುವವರ ವಿರುದ್ದ ಸೋಲನುಭವಿಸಿದ್ದರು. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಹಿತಶತ್ರು ಅಜಮ್ ಖಾನ್ ರಾಮಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ.
(ಏಜನ್ಸೀಸ್)
ನಗ್ನ ಸಿಡಿ : ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ












Click it and Unblock the Notifications