Get Updates
Get notified of breaking news, exclusive insights, and must-see stories!

ಜಯಪ್ರದಾ ಆತ್ಮಹತ್ಯೆ : ಅಮರ್ ಅಸಂಬದ್ಧ ಹೇಳಿಕೆ

Jaya prada may commit suicide: Amar Singh
ರಾಮಪುರ್, ಮೇ. 11 : ಸಮಾಜವಾದಿ ಪಕ್ಷದ ಮುಖಂಡರು ಅಸಂಬದ್ಧ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಸಮಾಜವಾದಿ ಪಕ್ಷದ ಮುಖಂಡ ಅಜಮ್ ಖಾನ್ ಜಯಪ್ರದಾ ಅವರ ನಗ್ನ ಸಿಡಿಗಳನ್ನು ಬಹಿರಂಗಗೊಳಿಸಿ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ ಬೆನ್ನಲ್ಲೇ ಜಯಪ್ರದಾ ಅವರನ್ನು ಈ ಸಲ ನೀವು ಗೆಲ್ಲಿಸದಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಹೇಳಿಕೆಯೊಂದು ಹೊರಬಿದ್ದಿದೆ. ಈ ಹೇಳಿಕೆಯನ್ನು ನೀಡಿದವರು ಜಯಪ್ರದಾ ಅವರ ನಿಕಟವರ್ತಿ ಹಾಗೂ ರಾಜಕೀಯ ಗಾಡ್ ಫಾದರ್ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಹೇಳುವ ಮೂಲರ ಬೆಚ್ಚಿಬೀಳಿಸಿದ್ದಾರೆ.

ಇಂಥ ಹೇಳಿಕೆ ರಾಜಕೀಯದಲ್ಲಿ ಅಪರೂಪವೇ ಆದರೂ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರೂ ಆಡುವ ರಾಜಕೀಯ ಚೆದುರಂಗದಾಟ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ವೈರಿಗಳನ್ನು ಹಣಿಯಲು ಈ ಮುಖಂಡರು ಯಾವ ಮಟ್ಟಕ್ಕೆ ಇಳಿಯಬಲ್ಲರು ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನಬೇಕಿಲ್ಲ. ಬಿಎಸ್ಪಿ ಸರಕಾರವನ್ನು ಪತನಗೊಳಿಸಲು ಯಾವ ಸಹಕಾರ ನೀಡಿತ್ತಾರೋ ಅವವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿಕೆ ನೀಡಿದ್ದರು.

ಮಾತು ಮುಂದುರೆಸಿದ ಅಮರ್ ಸಿಂಗ್, ನಮ್ಮ ಸೈಕಲ್ ದಿಲ್ಲಿಗೆ ಹೋಗಬೇಕೆಂದರೆ ನಿಮ್ಮ ಮತ ಅಗತ್ಯ. ರಾಮಪುರ್ ಕ್ಷೇತ್ರದಲ್ಲಿ ಈ ಸಾರಿ ಜಯಪ್ರದಾ ಅವರನ್ನು ಆರಿಸಿದಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಹುದು. ಆದ್ದರಿಂದ ಈ ಚುನಾವಣೆಯಲ್ಲಿ ಜಯಪ್ರದಾ ಅವರ ಕೈಹಿಡಿದು, ಸೈಕಲ್ ನ್ನು ದಿಲ್ಲಿಗೆ ಕಳುಹಿಸಿಕೊಂಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

2004 ರ ಲೋಕಸಭೆ ಚುನಾವಣೆಯಲ್ಲಿ ರಾಮಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಪ್ರದಾ ಕಾಂಗ್ರೆಸ್ ಪಕ್ಷದ ಬೇಗಂ ನೂರ್ ಬಾನು ಎಂಬುವವರ ವಿರುದ್ದ ಸೋಲನುಭವಿಸಿದ್ದರು. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಹಿತಶತ್ರು ಅಜಮ್ ಖಾನ್ ರಾಮಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ತಿಳಿದು ಬಂದಿದೆ.

(ಏಜನ್ಸೀಸ್)

ನಗ್ನ ಸಿಡಿ : ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+